ಬೈಂದೂರು: ಜಲಪಾತದಲ್ಲಿ ಕಲ್ಲು ಬಿದ್ದು ಮೃತ್ಯು

Update: 2019-07-29 16:39 GMT

ಬೈಂದೂರು, ಜು.29: ಎಳಜಿತ್ ಎಂಬಲ್ಲಿರುವ ಜಲಪಾತದಲ್ಲಿ ಕಲ್ಲೊಂದು ಮೈಮೇಲೆ ಬಿದ್ದು ಯುವಕನೊರ್ವ ಮೃತಪಟ್ಟ ಘಟನೆ ಜು.28ರಂದು ನಡೆದಿದೆ.

ಮೃತರನ್ನು ಬೈಂದೂರು ಮಯ್ಯಡಿ ನಿವಾಸಿ ಕುಮಾರ(24) ಎಂದು ಗುರು ತಿಸಲಾಗಿದೆ. ಇವರು ತನ್ನ ಗೆಳೆಯರೊಂದಿಗೆ ಎಳಜಿತ್ ಜಲಪಾತಕ್ಕೆ ಹೋಗಿದ್ದು ಅಲ್ಲಿ ಮೇಲಿನ ಕಲ್ಲು ಅಕಸ್ಮಿಕವಾಗಿ ಜಾರಿ ನೀರಿನಲ್ಲಿ ಆಡುತ್ತಿದ್ದ ಕುಮಾರ ಅವರ ಮೇಲೆ ಬಿತ್ತೆನ್ನಲಾಗಿದೆ.

ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News