ವೇದಿಕೆಯಲ್ಲೇ ಕುಸಿದ ನಿತಿನ್ ಗಡ್ಕರಿ

Update: 2019-08-01 18:11 GMT

ಮುಂಬೈ, ಆ.1: ಸೋಲಾಪುರದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ ವೇದಿಕೆಯಲ್ಲೇ ಅಸ್ವಸ್ಥಗೊಂಡು ಕುಸಿದ ಘಟನೆ ನಡೆದಿದೆ.

ಪುಣ್ಯಶ್ಲೋಕ ಅಹಲ್ಯಾದೇವಿ ಹೋಳ್ಕರ್ ಸೋಲಾಪುರ ವಿವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಗಡ್ಕರಿ, ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆ ಹಾಡುತ್ತಿರುವಂತೆಯೇ ತಲೆತಿರುಗಿದ ಅನುಭವವಾಗಿ ಎಡಭಾಗದತ್ತ ವಾಲಿದರು. ಆಗ ಭದ್ರತಾ ಸಿಬಂದಿ ಅವರ ಕೈಹಿಡಿದು ಕುರ್ಚಿಯಲ್ಲಿ ಕೂರಿಸಿದರು. ಸಚಿವರು ಅಸ್ವಸ್ಥರಾಗಿದ್ದು, ಬಳಿಕ ಅವರನ್ನು ವೈದ್ಯರು ಪರೀಕ್ಷೆ ನಡೆಸಿದರು ಎಂದು ಅಧಿಕಾರಿಗಳು ಹೇಳಿದ್ದಾರೆ.

  ಬುಧವಾರ ಗಂಟಲಿನ ಉರಿಯೂತ ಕಾಣಿಸಿಕೊಂಡಿದ್ದರಿಂದ ಅವರಿಗೆ ಆ್ಯಂಟಿಬಯಾಟಿಕ್ ಮಾತ್ರೆ ನೀಡಲಾಗಿತ್ತು. ಇದರ ಪರಿಣಾಮ ಗುರುವಾರ ತಲೆಸುತ್ತಿದ ಅನುಭವವಾಗಿದೆ . ಅವರೀಗ ಚೇತರಿಸಿಕೊಂಡಿದ್ದು ಆತಂಕ ಪಡುವ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಮತ್ತು ಈ ವರ್ಷದ ಎಪ್ರಿಲ್‌ನಲ್ಲಿಯೂ ಸಾರ್ವಜನಿಕ ಸಮಾರಂಭದಲ್ಲಿ ಗಡ್ಕರಿ ಕುಸಿದು ಬಿದ್ದ ಘಟನೆ ನಡೆದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News