ಭಾರೀ ಮಳೆ: ಸಂಪರ್ಕ ಕಡಿದುಕೊಂಡ ಉಡುಪಿ - ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ

Update: 2019-08-06 09:14 GMT

ಉಡುಪಿ: ಭಾರೀ ಮಳೆಯ ಪರಿಣಾಮ ಹೆಬ್ರಿ ಸಮೀಪದ ಬಂಡಿಮಠ ಎಂಬಲ್ಲಿ ಸೀತಾನದಿ ಉಕ್ಕಿ ಹರಿಯುತ್ತಿದ್ದು ಇದರಿಂದ ಉಡುಪಿ - ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಡಿದುಕೊಂಡಿದೆ.

ಅಪಾಯದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಇದಕ್ಕೆ ಪರ್ಯಾಯ ರಸ್ತೆ ಸೂಚಿಸಲಾಗಿದ್ದು, ಹೆಬ್ರಿಯಿಂದ ಶಿವಮೊಗ್ಗ ತೆರಳುವವರು ಕುಚ್ಚೂರು- ಮಾಂಡಿ ಮೂರ್ಕೈ- ಸೋಮೇಶ್ವರ ಮಾರ್ಗವಾಗಿ ಹಾಗೂ ಶಿವಮೊಗ್ಗ ಕಡೆಯಿಂದ ಉಡುಪಿ ಕಡೆಗೆ ಬರುವವರು ಅದೇ ಮಾರ್ಗವನ್ನು ಅವಲಂಬಿಸುವಂತೆ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News