ಸುಶ್ಮಾ ಸ್ವರಾಜ್ ರ ನಿಧನ ತುಂಬಲಾರದ ನಷ್ಟ: ಅಡ್ವಾಣಿ

Update: 2019-08-07 15:57 GMT

ಹೊಸದಿಲ್ಲಿ, ಆ. 7: ವಿದೇಶಾಂಗ ವ್ಯವಹಾರಗಳ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು, ‘‘ಸುಷ್ಮಾ ಸ್ವರಾಜ್ ಅವರ ನಿಧನ ತುಂಬಲಾರದ ನಷ್ಟ’’ ಎಂದಿದ್ದಾರೆ. ಅಸಮಾನ್ಯ ನಾಯಕಿಯೊಬ್ಬರನ್ನು ದೇಶ ಕಳೆದುಕೊಂಡಿದೆ. ಸುಷ್ಮಾಜಿ ಅವರ ಅನುಪಸ್ಥಿತಿ ನನ್ನನ್ನು ಕಾಡಲಿದೆ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಅವರು ಹೇಳಿದ್ದಾರೆ. ತಾನು ಅಧ್ಯಕ್ಷನಾಗಿದ್ದಾಗ ‘ಭರವಸೆಯ ಯುವ ಕಾರ್ಯಕರ್ತೆ’ ಸುಷ್ಮಾ ಸ್ವರಾಜ್ ಅವರನ್ನು ತಂಡಕ್ಕೆ ಸೇರಿಸಿಕೊಂಡೆ. ಅವರು ಪಕ್ಷದ ಜನಪ್ರಿಯ ಹಾಗೂ ಪ್ರಮುಖ ನಾಯಕರಾಗಿ ಬೆಳೆದರು ಎಂದು ಅಡ್ವಾಣಿ ಹೇಳಿದ್ದಾರೆ. ಸುಷ್ಮಾ ಸ್ವರಾಜ್ ಅವರನ್ನು ಚತುರ ವಾಗ್ಮಿ ಎಂದು ಕರೆದ ಅಡ್ವಾಣಿ, ಅವರು ಪ್ರೀತಿ ಹಾಗೂ ಸಹಾನುಭೂತಿಯ ಸ್ವಭಾವದ ಮೂಲಕ ಎಲ್ಲರ ಮನಸ್ಸಿಗೆ ಆಪ್ತರಾದರು. ನನ್ನ ಹುಟ್ಟಿದ ದಿನ ಅವರು ನನ್ನ ನೆಚ್ಚಿನ ಚಾಕಲೇಟ್ ಕೇಕ್ ತರದ ಒಂದು ವರ್ಷವೂ ನನಗೆ ನೆನಪಿಲ್ಲ ಎಂದು ಅಡ್ವಾಣಿ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News