ಚಲಿಸುತ್ತಿದ್ದ ರೈಲಿನಿಂದ ಬಿದ್ದು ಮಂಜೇಶ್ವರದ ಯುವಕ ಕೊಲ್ಲಂನಲ್ಲಿ ಮೃತ್ಯು

Update: 2019-08-08 06:33 GMT

ಮಂಜೇಶ್ವರ, ಆ.8: ಚಲಿಸುತ್ತಿದ್ದ ರೈಲಿನಿಂದ ಬಿದ್ದು ಗಂಭೀರ ಗಾಯಗೊಂಡು ಮಂಜೇಶ್ವರದ ಯುವಕನೋರ್ವ ಕೊಲ್ಲಂನಲ್ಲಿ ಮೃತಪಟ್ಟ ಘಟನೆ ಗುರುವಾರ ರಾತ್ರಿ ನಡೆದಿದೆ.

ಮೃತ ಯುವಕನನ್ನು ಕುಂಜತ್ತೂರು ಸಮೀಪದ ಬಾಚಲಿಕೆ ನಿವಾಸಿ ಜಮಾಲ್ ಅಹ್ಮದ್ ಎಂಬವರ ಪುತ್ರ ಮುಹಮ್ಮದ್ ಇರ್ಫಾನ್(27) ಎಂದು ಗುರುತಿಸಲಾಗಿದೆ. ತಿರುವನಂತಪುರದಲ್ಲಿ ಜ್ಯೂಸ್ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ ಇರ್ಫಾನ್ ರೈಲಿನಲ್ಲಿ ಊರಿಗೆ ಮರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

 ರೈಲು ಕೊಲ್ಲಂ ತಲುಪಿದಾಗ ಇರ್ಫಾನ್ ಆಕಸ್ಮಿಕವಾಗಿ ರೈಲಿನಿಂದ ಬಿದ್ದು ಮೃತಪಟ್ಟಿದ್ದರೆನ್ನಲಾಗಿದೆ.

ಮೃತದೇಹವನ್ನು ತಿರುವನಂತಪುರದ ಮೆಡಿಕಲ್ ಕಾಲೇಜು ಶವಾಗಾರದಲ್ಲಿಡಲಾಗಿದೆ. ಈ ಬಗ್ಗೆ ಕೊಲ್ಲಂ ಜಿಲ್ಲೆಯ ಇರವೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News