ತಾಯಿ-ಮಗು ನಾಪತ್ತೆ

Update: 2019-08-08 16:50 GMT

ಬ್ರಹ್ಮಾವರ, ಆ.8: ತನ್ನ ಸಂಬಂಧಿಯೊಬ್ಬರೊಂದಿಗೆ ಕುಂದಾಪುರದ ಸರಕಾರಿ ಆಸ್ಪತ್ರೆಗೆ ತೆರಳಿ ಮರಳುತಿದ್ದ ತಾಯಿ-ಮಗು ಮಾರ್ಗ ಮಧ್ಯೆ ಬಸ್ಸಿನಿಂದ ನಾಪತ್ತೆ ಯಾದ ಘಟನೆ ಬುಧವಾರ ವರದಿಯಾಗಿದೆ.

ಬೈಕಾಡಿಯ ಗಾಂಧಿನಗರದಲ್ಲಿರುವ ರತ್ನಾವತಿ ಅವರ ಮನೆಗೆ ಅವರ ಗಂಡನ ತಂಗಿಯಾದ ಚೈತ್ರಾ (28) ತನ್ನ ಒಂದು ವರ್ಷ ಎಂಟು ತಿಂಗಳ ಮಗು ಕೌಶಿಕ್‌ನೊಂದಿಗೆ 15 ದಿನಗಳ ಹಿಂದೆ ಬಂದಿದ್ದರು. ರತ್ನಾವತಿ ಅವರು ತನ್ನ ಬೆನ್ನು ನೋವಿನ ಚಿಕಿತ್ಸೆಗಾಗಿ ಬುಧವಾರ ಚೈತ್ರ ಹಾಗೂ ಮಗುವಿನೊಂದಿಗೆ ಕುಂದಾಪುರಕ್ಕೆ ತೆರಳಿದ್ದರು. ಮೂವರು ಬೆಳಗ್ಗೆ 11:30ಕ್ಕೆ ಕುಂದಾಪುರದ ಶಾಸ್ತ್ರಿ ಸರ್ಕಲ್‌ನಲ್ಲಿ ಬ್ರಹ್ಮಾವರಕ್ಕೆ ಬರಲು ಬಸ್ಸನ್ನೇರಿದ್ದರು.

ಆದರೆ ರತ್ನಾವತಿ ಅವರು ಅಪರಾಹ್ನ 12:30ಕ್ಕೆ ಬ್ರಹ್ಮಾವರಕ್ಕೆ ಬಂದು ನೋಡುವಾಗ ಬಸ್ಸಿನಲ್ಲಿ ಚೈತ್ರ ಹಾಗ ಮಗು ಇರಲಿಲ್ಲ. ರತ್ನಾವತಿ ಅವರಿಗಿಂತ ಮೂರು ಸೀಟು ಹಿಂದೆ ಕುಳಿತಿದ್ದ ತಾಯಿ-ಮಗು ದಾರಿ ಮಧ್ಯೆ ಎಲ್ಲೋ ಇಳಿದು ಹೋಗಿರಬೇಕು. ಆದರೆ ಹುಡುಕಿದರೂ ಅವರ ಪತ್ತೆಯಾಗಿಲ್ಲ ಎಂದು ರತ್ನಾವತಿ ತಾಯಿ-ಮಗುವಿನ ನಾಪತ್ತೆ ಬಗ್ಗೆ ಬ್ರಹ್ಮಾರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News