ನೆರೆ ಪರಿಹಾರ ಸಾಮಗ್ರಿಗಳ ಪ್ಯಾಕೆಟ್ನಲ್ಲಿ ಫಡ್ನವೀಸ್ ಭಾವಚಿತ್ರ!
Update: 2019-08-10 17:17 GMT
ಮುಂಬೈ, ಆ.10: ಮಹಾರಾಷ್ಟ್ರದ ನೆರೆ ಸಂತ್ರಸ್ತ ಪ್ರದೇಶಗಳಲ್ಲಿ ಸೆಲ್ಫಿ ತೆಗೆದು ವಿವಾದಕ್ಕೆ ಒಳಗಾಗಿದ್ದ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತೊಂದು ವಿವಾದಕ್ಕೆ ಒಳಗಾಗಿದ್ದಾರೆ. ನೆರೆ ಪರಿಹಾರ ಸಾಮಗ್ರಿಗಳ ಪ್ಯಾಕೆಟ್ಗಳ ಮೇಲೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಭಾವಚಿತ್ರ ಮುದ್ರಿಸಿರುವ ಬಗ್ಗೆ ರಾಜ್ಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ರಾಜ್ಯದಲ್ಲಿ ಚುನಾವಣೆ ನಡೆಯಲು 1 ತಿಂಗಳು ಇರುವಾಗ ಜನರಿಗೆ ನೆರವು ನೀಡುವ ನೆಪದಲ್ಲಿ ಬಿಜೆಪಿ ಲಾಭ ಪಡೆಯಲು ಯತ್ನಿಸುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಈ ಪ್ಯಾಕೆಟ್ನಲ್ಲಿ ಫಡ್ನವೀಸ್ ಅವರ ಭಾವಚಿತ್ರವಲ್ಲದೆ ಬಿಜೆಪಿ ಶಾಸಕ ಸುರೇಶ್ ಹಲ್ವಂಕರ್ ಅವರ ಚಿತ್ರವನ್ನು ಒಳಗೊಂಡ ಸ್ಟಿಕ್ಕರ್ ಅನ್ನು ಕೂಡ ಅಂಟಿಸಲಾಗಿದೆ. ಈ ಪರಿಹಾರ ಸಾಮಗ್ರಿಗಳನ್ನು ಸಾಂಗ್ಲಿ ಹಾಗೂ ಕೊಲ್ಹಾಪುರದಲ್ಲಿರುವ ನೆರೆ ಸಂತ್ರಸ್ತರಿಗೆ ಪೂರೈಸಲಾಗಿದೆ.