ನಿತಿನ್ ಗಡ್ಕರಿ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ, ಹಾರಾಟ ಸ್ಥಗಿತ

Update: 2019-08-13 06:03 GMT

 ಹೊಸದಿಲ್ಲಿ, ಆ.13: ಕೇಂದ್ರ ಸಚಿವ ನಿತಿನ್ ಗಡ್ಕರಿ ಸಹಿತ ಹಲವು ಪ್ರಯಾಣಿಕರನ್ನು ಹೊತ್ತ ಇಂಡಿಯೋ ವಿಮಾನದಲ್ಲಿ ‘ಗಂಭೀರ ತಾಂತ್ರಿಕ ಸಮಸ್ಯೆ’ಕಂಡು ಬಂದ ಕಾರಣ ಹಾರಾಟ ಸ್ಥಗಿತಗೊಳಿಸಿರುವ ವಿದ್ಯಮಾನ ಮಂಗಳವಾರ ಬೆಳಗ್ಗೆ ನಡೆದಿದೆ. ನಾಗ್ಪುರದಿಂದ ಹೊಸದಿಲ್ಲಿಗೆ ಹೊರಟಿದ್ದ ಇಂಡಿಯೊ ವಿಮಾನ 6 ಇ 636ನಲ್ಲಿ ಇನ್ನೇನು ಟೇಕ್ ಆಫ್ ಪಡೆಯಲು ಕೆಲವೇ ಸೆಕೆಂಡ್‌ಗಳಿದ್ದಾಗ ಗಂಭೀರ ಸಮಸ್ಯೆಯನ್ನು ಪತ್ತೆ ಹಚ್ಚಿದ ಪೈಲಟ್ ಸಮಯಪ್ರಜ್ಞೆ ಮೆರೆದರು.

ಪೈಲಟ್ ಟೇಆಫ್‌ನ್ನು ಸ್ಥಗಿತಗೊಳಿಸಿದ ಬಳಿಕ ವಿಮಾನ ರನ್‌ವೇನಿಂದ ಟ್ಯಾಕ್ಸಿವೇಗೆ ವಾಪಸಾಯಿತು.

ಕೇಂದ್ರದ ರಸ್ತೆ ಹಾಗೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಸಹಿತ ಹಲವು ಪ್ರಯಾಣಿಕರು ವಿಮಾನ ಏರಿದ್ದರು. ತಾಂತ್ರಿಕ ಸಮಸ್ಯೆ ಕಂಡುಬಂದ ಬಳಿಕ ವಿಮಾನದಿಂದ ಕೆಳಗಿಳಿದು ಮತ್ತೊಂದು ವಿಮಾನಕ್ಕಾಗಿ ನಾಗ್ಪುರ ಏರ್‌ಪೋರ್ಟ್‌ನಲ್ಲಿ ಕಾಯುತ್ತಿದ್ದಾರೆ ಎಂದು ಏರ್‌ಪೋರ್ಟ್ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News