ಜೈಸಲ್ಮಾರ್: ದಲಿತನಿಗೆ ಕಿರುಕುಳ ಜಾತಿ ಪಂಚಾಯತ್‌ನ 40 ಸದಸ್ಯರ ವಿರುದ್ಧ ಪ್ರಕರಣ ದಾಖಲು

Update: 2019-08-14 18:18 GMT

ಜೈಪುರ, ಆ. 14: ದಲಿತ ವ್ಯಕ್ತಿಗೆ ಕಿರುಕುಳ ನೀಡಿದ ಆರೋಪದಲ್ಲಿ ರಾಜಸ್ಥಾನದ ಜೈಸಲ್ಮಾರ್‌ನ ಜಾತಿ ಪಂಚಾಯತ್‌ನ 40 ಸದಸ್ಯರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಾತಿ ಪಂಚಾಯತ್ ಸದಸ್ಯರು ಕಳೆದ 15 ವರ್ಷಗಳಿಂದ ತನಗೆ ಕಿರುಕುಳ ನೀಡುತ್ತಿದ್ದಾರೆ. ಕ್ರಮ ಕೈಗೊಳ್ಳದೆ ಇದ್ದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರಾಮಗಢ ಗ್ರಾಮದ ನಿವಾಸಿ ಭೇರಾರಾಮ್ ಮೇಘ್ವಾಲ್ ಹೇಳಿದ್ದರು.

ಮೇಘ್ವಾಲ್ ಆಗಸ್ಟ್ 10ರಂದು ದೂರು ಸಲ್ಲಿಸಿದ ಬಳಿಕ ಜಾತಿ ಪಂಚಾಯತ್‌ನ 40 ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ರಾಮಗಢ ಠಾಣೆಯ ಅಧಿಕಾರಿ ಉಗಮ್‌ರಾಜ್ ಸೋನಿ ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಆರೋಪಿಗಳನ್ನು ಕೂಡಲೇ ಬಂಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಪಂಚಾಯತ್ ಸದಸ್ಯರು 2004ರಿಂದ ಆಗಾಗ ನಮ್ಮ ಕುಟುಂಬಕ್ಕೆ ಬಹಿಷ್ಕಾರ ಹಾಕುತ್ತಿದ್ದಾರೆ ಹಾಗೂ ನನ್ನಿಂದ ಹಣ ಸುಲಿಗೆ ಮಾಡುತ್ತಿದ್ದಾರೆ ಎಂದು ಮೇಘ್ವಾಲ್ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News