ಭ್ರಷ್ಟಾಚಾರ ಜನರ ಜೀವನದಲ್ಲಿ ಗೆದ್ದಲಿನಂತೆ ನುಸುಳಿದೆ: ಪ್ರಧಾನಿ ಮೋದಿ

Update: 2019-08-15 15:11 GMT

ಹೊಸದಿಲ್ಲಿ, ಆ.15: ಭ್ರಷ್ಟಾಚಾರ ಎನ್ನುವುದು ಭಾರತೀಯರ ಜೀವನದಲ್ಲಿ ಗೆದ್ದಲಿನಂತೆ ನುಸುಳಿದೆ ಮತ್ತು ತಂತ್ರಜ್ಞಾನದ ನಿರಂತರ ನೆರವಿನಿಂದ ಕೇಂದ್ರ ಸರಕಾರ ಈ ಪಿಡುಗನ್ನು ನಿವಾರಿಸಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಪ್ರಧಾನಿ ಮೋದಿ ಗುರುವಾರ ತಿಳಿಸಿದ್ದಾರೆ. ಭ್ರಷ್ಟಾಚಾರವನ್ನು ತೊಡೆದು ಹಾಕುವಲ್ಲಿ ಭಾರತ ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿದೆ. ಆದರೆ ಈ ಪಿಡುಗು ಎಷ್ಟು ಆಳವಾಗಿದೆಯೆಂದರೆ ಕೇವಲ ಸರಕಾರ ಮಾತ್ರವಲ್ಲ, ಪ್ರತಿಯೊಬ್ಬರೂ ಪ್ರತಿ ಹಂತದಲ್ಲೂ ಅದನ್ನು ಸೋಲಿಸಲು ಪ್ರಯತ್ನಿಸಬೇಕು ಎಂದು ಅವರು ಅಭಿಪ್ರಾಯಿಸಿದ್ದಾರೆ.

ಎಲ್ಲ ಕಾರ್ಯಗಳೂ ಒಂದೇ ಪ್ರಯತ್ನದಲ್ಲಿ ಪೂರ್ಣಗೊಳ್ಳುವುದಿಲ್ಲ. ಹೆಚ್ಚಿನ ಚಟಗಳು ಮತ್ತು ರೋಗಗಳು ಕೆಲವು ಸಮಯದ ನಂತರ ಗುಣವಾಗಬಹುದು. ಆದರೆ ಅವುಗಳು ಅವಕಾಶ ಸಿಕ್ಕಾಗಲೆಲ್ಲಾ ಮರುಕಳಿಸುತ್ತವೆ ಎಂದು ಪ್ರಧಾನಿ ಅಭಿಪ್ರಾಯಿಸಿದ್ದಾರೆ. 21ನೇ ಶತಮಾನದ ಭಾರತದ ನೀಲಿನಕ್ಷೆಯನ್ನು ಸರಕಾರ ಸಿದ್ಧಪಡಿಸಿದ್ದು, ಕಳೆದ ಐದು ವರ್ಷಗಳಲ್ಲಿ ಜನರ ಅಗತ್ಯಗಳನ್ನು ಪೂರೈಸಿರುವ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಮುಂದಿನ ಐದು ವರ್ಷಗಳಲ್ಲಿ ಜನರ ಕನಸುಗಳನ್ನು ಈಡೇರಿಸಲು ಕೆಲಸ ಮಾಡಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News