ಕಾರ್ಕಳ: ಅರ್ಬಿ ಫಾಲ್ಸ್ ಗೆ ಬಿದ್ದಿದ್ದ ಯುವಕನ ಮೃತದೇಹ ಪತ್ತೆ
Update: 2019-08-16 06:57 GMT
ಕಾರ್ಕಳ, ಆ.16: ನಿಟ್ಟೆ ಗ್ರಾಮದ ಪರಪ್ಪಾಡಿ ಅರ್ಬಿ ಫಾಲ್ಸ್ ನಲ್ಲಿ ಸೆಲ್ಫಿ ತೆಗೆಯುತ್ತಿದ್ದ ವೇಳೆ ಬಿದ್ದು ನೀರಿನಲ್ಲಿ ಕೊಚ್ಚಿಕೊಂಡಿದ್ದ ಹೋಗಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಇಂದು ಪೂರ್ವಾಹ್ನ 11:30ರ ಸುಮಾರಿಗೆ ಫಾಲ್ಸ್ ಬಳಿ ಪತ್ತೆಯಾಗಿದೆ.
ನಂದಳಿಕೆ ಗ್ರಾಮದ ಕೆದಿಂಜೆ ಮಂಜರಪಲ್ಕೆಯ ಅಬ್ಬನಡ್ಕ ನಿವಾಸಿ ಕೃಷ್ಣ ಮೂಲ್ಯ ಎಂಬವರ ಪುತ್ರ ಸುದೇಶ್(26) ಮೃತಪಟ್ಟವರು.
ಸುದೇಶ್(26) ಹಾಗೂ ನಂದಳಿಕೆಯ ಭರತ್ ಪೂಜಾರಿ ಎಂಬವರು ನಿನ್ನೆ ಅಪರಾಹ್ನ ಅರ್ಬಿ ಫಾಲ್ಸ್ ನಲ್ಲಿ ತಮ್ಮ ಮೊಬೈಲ್
ಫೋನ್ ನಲ್ಲಿ ಸೆಲ್ಫಿ ತೆಗೆಯುತ್ತಿದ್ದಾಗ ಕಾಲು ಜಾರಿ ನೀರಿಗೆ ಬಿದ್ದರೆನ್ನಲಾಗಿದೆ. ಈ ವೇಳೆ ಭರತ್ ಈಜಿಕೊಂಡು ಮೇಲೆ ಬಂದಿದ್ದರೆ, ಸುದೇಶ್ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ಸಂಜೆಯಿಂದ ಹುಡುಕಾಟ ನಡೆಸಲಾಗಿತ್ತು. ಇಂದು ಪೂರ್ವಾಹ್ನ ಸುದೇಶ್ ಮೃತದೇಹ ಪತ್ತೆಯಾಗಿದೆ.