ಉಡುಪಿ: ಆ.25ರಂದು ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆ

Update: 2019-08-16 14:11 GMT

ಉಡುಪಿ, ಆ.16: ಅಲೆವೂರು ಗುಡ್ಡೆಅಂಗಡಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ 35ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಮಂಗಳೂರು ಯುವವಾಹಿನಿ ಉಡುಪಿ ಘಟಕದ ಸಹಯೋಗದೊಂದಿಗೆ ಪ್ರೌಢಶಾಲಾ ಮಕ್ಕಳಿಗೆ ಜಿಲ್ಲಾ ಮಟ್ಟದ ಪ್ರಬಂಧ, ಚಿತ್ರಕಲೆ ಮತ್ತು ಭಕ್ತಿಗೀತೆ ಸ್ಫರ್ಧೆ ಹಾಗೂ ಪ್ರಾಥಮಿಕ ಶಾಲಾ ಮಕ್ಕಳಿಗೆ ಭಕ್ತಿಗೀತೆ ಮತ್ತು ಚಿತ್ರಕಲೆ ಸ್ಫರ್ಧೆಯನ್ನು ಆ.25 ರಂದು ಅಲೆವೂರು ಗಿರಿಜಾ ಸರ್ಕಲ್ ಬಳಿಯ ಸಂಕಲ್ಪಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ಪ್ರತಿ ವಿಭಾಗಕ್ಕೆ ಒಂದು ಶಾಲೆಯಿಂದ ತಲಾ ಇಬ್ಬರು ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. ಆಸಕ್ತ ವಿದ್ಯಾರ್ಥಿಗಳು ತಮ್ಮ ಶಾಲಾ ಪ್ರಮಾಣಪತ್ರ ದೊಂದಿಗೆ ಭಾಗವಹಿಸಲು ವಿನಂತಿಸಲಾಗಿದೆ.

ಹೆಚ್ಚಿನ ವಿವರಗಳಿಗೆ ಸಮಿತಿಯ ಸಮರನಾಥ ಶೆಟ್ಟಿ(9844720262), ಸುರೇಶ್ ಕುಮಾರ್(9980196456) ಮತ್ತು ಕೃಷ್ಣ ನಾಯ್ಕಿ(9844995929), ರಂಜಿತ್ ನಾಯ್ಕಿ(9743581676) ಇವರನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News