ಬೆಳ್ತಂಗಡಿ: ನೆರೆ ಸಂತ್ರಸ್ತರ ನೆರವಿಗೆ ಧಾವಿಸಿದ ಸುನ್ನಿ ನಾಯಕರು

Update: 2019-08-17 15:47 GMT

ಮಂಗಳೂರು: ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ದಿಡುಪೆ, ಕಾಜೂರು, ಕಿಲ್ಲೂರು, ಕುಕ್ಕಾವು, ಪೆರ್ದಾಡಿಯಲ್ಲಿ ನೆರೆಯಿಂದ ಸಂತ್ರಸ್ತಕ್ಕೀಡಾಗಿ ಸಂಕಷ್ಟ ಗೊಳಗಾದ ಜನರನ್ನು ಸುನ್ನಿ ನಾಯಕರು ಭೇಟಿಯಾಗಿ ನೆರವು ನೀಡಿದರು.

ಕರ್ನಾಟಕ ಮುಸ್ಲಿಂ ಜಮಾಅತ್ ಪಧಾನ ಕಾರ್ಯದರ್ಶಿ ಶಾಫಿ ಸಅದಿ ಬೆಂಗಳೂರು ಇವರ ನಾಯಕತ್ವದಲ್ಲಿ ಕೆಸಿಎಫ್ ಐಎನ್ ಸಿ ಕಾರ್ಯದರ್ಶಿ ರಹೀಂ ಸಅದಿ, ಎಸ್.ವೈ.ಎಸ್ ಝೋನ್ ಅಧ್ಯಕ್ಷ ಎಸ್.ಎಂ ತಂಙಲ್, ಜಿಲ್ಲಾ ಎಸ್.ವೈ.ಎಸ್ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ, ರಾಜ್ಯ ಎಸ್ಸೆಸ್ಸೆಫ್ ನಾಯಕರಾದ ಸಾದಿಕ್ ಮಲೆಬೆಟ್ಟು, ಸುಫ್ಯಾನ್ ಸಖಾಫಿ, ಕೆಸಿಎಫ್ ನಾಯಕ ಇಕ್ಬಾಲ್ ಕಾಜೂರು, ಕಾಜೂರು ದರ್ಗಾ ಪ್ರಧಾನ ಕಾರ್ಯದರ್ಶಿ ಸಿದ್ದೀಖ್, ಯಕೂಬ್ ಸಅದಿ, ಇಸ್ಮಾಯಿಲ್ ಮಾಸ್ಟರ್, ಜಿಲ್ಲಾ ಎಸ್ಸೆಸ್ಸೆಫ್ ನಾಯಕ ರಶೀದ್ ವಗ್ಗ, ಅಯ್ಯುಬ್ ಮಹ್ಲರಿ, ಇಸ್ವಾಬಃ ಅಮೀರ್ ಅಬೂಸ್ವಾಲಿಹ್, ನಝೀರ್ ಪೆರ್ದಾಡಿ ಹಾಗೂ ಬೆಳ್ತಂಗಡಿ ಡಿವಿಷನ್ ನಾಯಕರು ಮತ್ತು ಪೆರ್ದಾಡಿ ಯುನಿಟ್ ಅಧ್ಯಕ್ಷ ಸಲೀಂ ಪೆರ್ದಾಡಿ ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News