ಸಾಂಬಾರ್‍ತೋಟ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಅಭಿನಂದಿಸಿದ ಪ್ರೊ.ಎ.ಎಂ.ಖಾನ್

Update: 2019-08-18 12:55 GMT

ಕೊಣಾಜೆ: ಸ್ವಾತಂತ್ರ್ಯ ಆಚರಣೆಯ ಸಂದರ್ಭದಲ್ಲಿ ಗಾಳಿ ಮಳೆ ಸುರಿಯುತ್ತಿದ್ದರೂ ರಾಷ್ಟ್ರಗೀತೆ ಪೂರ್ಣಗೊಳಿಸಿ ರಾಷ್ಟ್ರಗೀತೆಗೆ ಗೌರವ ಸಲ್ಲಿಸಿದ ಮುಡಿಪು ಸಮೀಪದ ಸಾಂಬಾರ್‍ತೋಟ ಶಾಲೆಯ ವಿದ್ಯಾರ್ಥಿಗಳನ್ನು ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಎ.ಎಂ.ಖಾನ್ ಭೇಟಿ ನೀಡಿ ಅಭಿನಂದನೆ ಸಲ್ಲಿಸಿದರು.

ಮಕ್ಕಳ ದೇಶಪ್ರೇಮವನ್ನು ಕೊಂಡಾಡಿದ ಅವರು, ಪ್ರಸ್ತುತ ಸಮಾಜದಲ್ಲಿ ವಿದ್ಯಾರ್ಥಿಗಳ ಇಂತಹ ಮಾದರಿ ಕಾರ್ಯಗಳು ನಮಗೆಲ್ಲರಿಗೂ ಪ್ರೇರಣೆಯಾಗಿದೆ. ಹಲವು ಭಾರಿ ನಾವು ಮಕ್ಕಳಲ್ಲಿಯೂ ಇಂತಹ ಮೌಲ್ಯಗಳನ್ನು ನಾವು ಗುರುತಿಸಲು ಸಾಧ್ಯಾವಾಗುತ್ತದೆ. ಮುಂದಿನ ದಿನಗಳಲ್ಲಿ ಶಾಲೆಯು ಇನ್ನಷ್ಟು ಮಾದರಿ ಶಾಲೆಯಾಗಿ ಹೊರಹೊಮ್ಮಲಿ ಎಂದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯಿನಿ ಸಹನಾಝ್ ಪರ್ವಿನ್, ಹಸನ್ ಹಾಜಿ, ಜಿ.ಎಂ.ಹನೀಫ್, ಎಸ್.ಎಸ್.ಇಸ್ಮಾಯಿಲ್, ಅಬ್ದುಲ್ ಅಝೀಜ್, ಮಹಮ್ಮದ್ ಅಸ್ಗರ್, ಯಾಕೂಬು, ಹನೀಫ್, ರಝಾಕ್ ಮೊದಲಾದವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News