ಪುತ್ತೂರು ಎಪಿಎಂಸಿ ಗೋದಾಮು ಉದ್ಘಾಟನೆ ಮುಂದೂಡಿಕೆ

Update: 2019-08-18 13:04 GMT

ಪುತ್ತೂರು: ಪುತ್ತೂರು ಕೃಷಿ ಉತ್ಪನ್ನ ಮಾರುಕಟ್ಟೆ(ಎಪಿಎಂಸಿ) ಸಮಿತಿ ವತಿಯಿಂದ ಆ.20 ರಂದು ನಿಗದಿಪಡಿಸಲಾಗಿದ್ದ ಅಡಕೆ ಗೋದಾಮು ಉದ್ಘಾಟನೆ ಹಾಗೂ ವರ್ತಕರ ಸಭೆಯನ್ನು ಮುಂದೂಡಲಾಗಿದೆ ಎಂದು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ತಿಳಿಸಿದ್ದಾರೆ.

ರಾಜ್ಯದ ಸಚಿವ ಸಂಪುಟದ ವಿಸ್ತರಣೆ ಇರುವುದರಿಂದ ಶಾಸಕರು, ಸಂಸದರು ಅಲಭ್ಯರಿರುತ್ತಾರೆ. ಕಾರ್ಯಕ್ರಮದಲ್ಲಿ ಎಪಿಎಂಸಿ ರೈಲ್ವೇ ಲೆವೆಲ್ ಕ್ರಾಸ್‍ಗೆ ಸಂಬಂಧಪಟ್ಟಂತೆಯೂ ಸಂಸದರು ಹಾಗೂ ಶಾಸಕರ ಜತೆ ಸಭೆ ನಡೆಸಲು ನಿರ್ಧರಿಸಲಾಗಿತ್ತು. ಈ ಎಲ್ಲಾ ಕಾರಣಗಳಿಂದ ಉದ್ಘಾಟನೆ ಸಮಾರಂಭ ಮತ್ತು ವರ್ತಕರ ಸಭೆಯನ್ನೂ ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News