ಮೂಡುಬಿದಿರೆ: ಕಟ್ಟಡದ ಮೇಲ್ಛಾವಣಿ-ಗೋಡೆ ಕುಸಿದು ಬಿದ್ದು ಮಹಿಳೆ ಮೃತ್ಯು
Update: 2019-08-18 13:50 GMT
ಮೂಡುಬಿದಿರೆ: ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡಂದಲೆಯ ಸುಬ್ರಹ್ಮಣ್ಯ ಸ್ವಾಮಿ ಶಾಲೆಗೆ ಸಂಬಂಧಿಸಿದ ಕಟ್ಟಡದ ಗೋಡೆ ಮತ್ತು ಮೇಲ್ಛಾವಣಿ ಕುಸಿದು ಬಿದ್ದು ಮಹಿಳೆ ಸಾವನಪ್ಪಿದ ಘಟನೆ ರವಿವಾರ ಬೆಳಿಗ್ಗೆ ನಡೆದಿದೆ.
ಕಡಂದಲೆಯ ಮೀನಾಕ್ಷಿ ಗೌಡ(63) ಮೃತ ಮಹಿಳೆ. ಕೆಲವು ದಿನಗಳಿಂದ ಮೀನಾಕ್ಷಿ ಕಡಂದಲೆ ಬಿ.ಟಿ ನಗರದಲ್ಲಿರುವ ಸುಬ್ರಹ್ಮಣ್ಯ ಸ್ವಾಮಿ ಶಾಲೆಗೆ ಸಂಬಂಧಪಟ್ಟ ಶಿಥಿಲಾವಸ್ಥೆಯಲ್ಲಿರುವ ಕಟ್ಟಡದಲ್ಲಿ ಆಶ್ರಯ ಪಡದುಕೊಂಡಿದ್ದರು. ಕೆಲವು ದಿನಗಳಿಂದ ಇಲ್ಲಿ ಸುರಿದ ಭಾರೀ ಮಳೆಗೆ ಕಟ್ಟಡದ ಗೋಡೆ ಬಿರುಕುಬಿಟ್ಟು ಅಪಾಯಕಾರಿ ಸ್ಥಿತಿಯಲ್ಲಿತ್ತು. ರವಿವಾರ ಬೆಳಿಗ್ಗೆ ಕಟ್ಟಡದ ಗೋಡೆ ಹಾಗೂ ಮೇಲ್ಚಾವಣಿ ಮಹಿಳೆ ಮೇಲೆ ಬಿದ್ದು ಅವರು ಸಾವನಪ್ಪಿದ್ದಾರೆ.
ಶಾಸಕ ಉಮಾನಾಥ ಕೋಟ್ಯಾನ್, ತಹಾಶೀಲ್ದಾರ್ ಅನಿತಾಲಕ್ಷ್ಮೀ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೂಡುಬಿದಿರೆ ಎಸ್.ಐ ದೇಜಪ್ಪ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.