ಏಮ್ಸ್ ಅಗ್ನಿ ದುರಂತ ಪ್ರಕರಣ: ಕ್ರೈಂಬ್ರಾಂಚ್ ತನಿಖೆಗೆ ನಿರ್ಧಾರ
Update: 2019-08-18 17:27 GMT
ಹೊಸದಿಲ್ಲಿ, ಆ.18: ಅಖಿಲ ಭಾರತ ವೈದ್ಯವಿಜ್ಞಾನ ಸಂಸ್ಥೆ(ಎಐಐಎಂಎಸ್)ನಲ್ಲಿ ಶನಿವಾರ ಸಂಭವಿಸಿದ ಅಗ್ನಿ ದುರಂತ ಪ್ರಕರಣದ ಬಗ್ಗೆ ದಿಲ್ಲಿ ಪೊಲೀಸ್ನ ಅಪರಾಧ ಪತ್ತೆ ದಳ (ಕ್ರೈಂಬ್ರಾಂಚ್) ತನಿಖೆ ನಡೆಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರವಿವಾರ ಅಜ್ಞಾತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಆರಂಭಿಸಲಾಗಿದೆ. ಅಗ್ನಿ ದುರಂತ ಸಂಭವಿಸಿದ್ದ ಕಟ್ಟಡ ನಿರಾಕ್ಷೇಪಣಾ ಪತ್ರ ಪಡೆದಿರಲಿಲ್ಲ ಎಂದು ದಿಲ್ಲಿಯ ಅಗ್ನಿ ಶಾಮಕ ಸೇವಾ ವಿಭಾಗ ತಿಳಿಸಿದೆ.
ಬೆಂಕಿ ಅನಾಹುತ ಸಂಭವಿಸಿದ ಸ್ಥಳದಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯದ ತಂಡದವರು ಪರಿಶೋಧನೆ ನಡೆಸಿ ದಿಲ್ಲಿ ಪೊಲೀಸರಿಗೆ ವರದಿ ಒಪ್ಪಿಸಲಿದ್ದಾರೆ. ವರದಿಯ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.