ಜಮ್ಮುವಿನ ತಾವಿ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಇಬ್ಬರ ರಕ್ಷಣೆ

Update: 2019-08-19 09:11 GMT

ಶ್ರೀನಗರ, ಆ.19: ಜಮ್ಮುವಿನ ತಾವಿ ನದಿಯಲ್ಲಿ ಸೋಮವಾರ ಮಧ್ಯಾಹ್ನ  ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ  ಇಬ್ಬರನ್ನು ಸೇನೆ ಕಾರ್ಯಾಚರಣೆಯ ಮೂಲಕ ಪಾರು ಮಾಡಿದೆ.

ನಿರ್ಮಾಣ ಹಂತದಲ್ಲಿರುವ ಜಮ್ಮುವಿನ ಸೇತುವೆಯ ಬಳಿ   ಮೀನು ಹಿಡಿಯಲು ತೆರಳಿದ್ದ ನಾಲ್ವರು   ನದಿಯಲ್ಲಿ ಏಕಾಏಕಿ ಪ್ರವಾಹ ಏರಿಕೆಯಾದ ಹಿನ್ನೆಲೆಯಲ್ಲಿ ಸಿಲುಕಿಕೊಂಡರು ಎನ್ನಲಾಗಿದೆ.

ಈ ಪೈಕಿ ಇಬ್ಬರು ಈಜಿ ನದಿಯ ದಡ ಸೇರಿದರು. ಆದರೆ  ನದಿಯ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ   ಇಬ್ಬರನ್ನು ಕಾರ್ಯಾಚರಣೆ ನಡೆಸಿದ ಭಾರತದ ವಾಯು  ಸೇನೆ  ಹೆಲಿಕಾಪ್ಟರ್  ಬಳಸಿ  ಪಾರು ಮಾಡಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News