ಸಿದ್ಧಾರ್ಥ ಸಾವು ಪ್ರಕರಣದ ಅಂತಿಮ ವರದಿ ಸಲ್ಲಿಕೆಯಾಗಿಲ್ಲ: ಪೊಲೀಸ್ ಆಯುಕ್ತ ಡಾ.ಹರ್ಷ

Update: 2019-08-19 09:48 GMT

ಮಂಗಳೂರು: 'ಕೆಫೆ ಕಾಫಿ ಡೇ' ಸಂಸ್ಥಾಪಕ, ಉದ್ಯಮಿ ಸಿದ್ಧಾರ್ಥ ಸಾವು ಪ್ರಕರಣದ ಅಂತಿಮ ಮರಣೋತ್ತರ ವರದಿ ಸಲ್ಲಿಕೆಯಾಗಿರುವುದಾಗಿ ಸುದ್ದಿವಾಹಿನಿಗಳು ವದಂತಿ ಹಬ್ಬಿಸುತ್ತಿವೆ. ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಸ್ಪಷ್ಟಪಡಿಸಿದ್ದಾರೆ.

ಖಾಸಗಿ ಸುದ್ದಿವಾಹಿನಿಗಳು ಸೋಮವಾರ ಬೆಳಗ್ಗೆಯಿಂದಲೇ ''ಸಿದ್ಧಾರ್ಥ ಸಾವು ಪ್ರಕರಣದ ಅಂತಿಮ‌ ವರದಿ ಪೊಲೀಸ್ ಇಲಾಖೆಗೆ ಸಲ್ಲಿಕೆಯಾಗಿದೆ" ಎಂದು ವದಂತಿ ಪ್ರಸಾರ ಮಾಡುತ್ತಿವೆ. ಇಲ್ಲಿಯವರೆಗೆ ಯಾವುದೇ ವರದಿ ತಮಗೆ ಸಲ್ಲಿಸಿಲ್ಲ ಎಂದೂ ಆಯುಕ್ತರು ತಿಳಿಸಿದ್ದಾರೆ.

ವದಂತಿ ಗಮನಕ್ಕೆ ಬಂದ ತಕ್ಷವೇ ತನಿಖಾ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಸಿದ್ದೇನೆ. ಇನ್ನುವರೆಗೆ ಯಾವುದೇ ಸಿದ್ಧಾರ್ಥ ಪ್ರಕರಣದ ಅಂತಿಮ ಮರಣೋತ್ತರ ವರದಿ ಬಂದಿಲ್ಲ ಎಂದು ಆಯುಕ್ತ ಡಾ.ಹರ್ಷ ಪುನರುಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News