ದೇಶವನ್ನು ಒಡೆಯುವವರು ಕ್ರಿಮಿನಲ್‌ಗಳು

Update: 2019-08-19 15:49 GMT

ಪ್ರಜ್ಞಾ ಸಿಂಗ್ ಭೋಪಾಲ(ಮ.ಪ್ರ),ಆ.19: ವಿಧಿ 370ರ ಮೂಲಕ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದಕ್ಕಾಗಿ ಮಾಜಿ ಪ್ರಧಾನಿ ಜವಾಹರ ಲಾಲ್ ನೆಹರು ಅವರನ್ನು ‘ಕ್ರಿಮಿನಲ್ ’ ಎಂದು ಬಣ್ಣಿಸಿದ್ದ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್ ಅವರ ಹೇಳಿಕೆಯನ್ನು ಬೆಂಬಲಿಸುವ ಮೂಲಕ ಭೋಪಾಲದ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ಹೊಸ ವಿವಾದವೊಂದನ್ನು ಹುಟ್ಟು ಹಾಕಿದ್ದಾರೆ. ‘ನಮ್ಮ ಮಾತೃಭೂಮಿಗೆ ನೋವನ್ನುಂಟು ಮಾಡುವ,ನಮ್ಮ ಭಾರತವನ್ನು ಒಡೆಯಲು ಪ್ರಯತ್ನಿಸುವ ಯಾರೇ ಆದರೂ ಖಂಡಿತವಾಗಿಯೂ ಕ್ರಿಮಿನಲ್‌ಗಳು ’ ಎಂದು ನೆಹರು ಅವರನ್ನು ಗುರಿಯಾಗಿಸಿಕೊಂಡು ಅವರು ಹೇಳಿದ್ದಾರೆ.

‘ವಿಧಿ 370ರ ರದ್ದತಿಯನ್ನು ವಿರೋಧಿಸುತ್ತಿರುವವರು ದೇಶಪ್ರೇಮಿಗಳಲ್ಲ. 370 ಮತು 35ಎ ವಿಧಿಗಳ ರದ್ದತಿಯಿಂದ ಸಂತಸಗೊಂಡವರಿಗೆ ನಮ್ಮ ದೇಶದ ಬಗ್ಗೆ ಹೆಮ್ಮೆಯಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಬಗ್ಗೆ ಹೆಮ್ಮೆಯುಳ್ಳವರು ದೇಶಪ್ರೇಮಿಗಳಾಗಿದ್ದಾರೆ’ ಎಂದೂ ಠಾಕೂರ್ ಹೇಳಿದರು.

ಚೌಹಾಣ್ ಅವರು ಕಳೆದ ವಾರ ನೆಹರು ಕುರಿತು ಮಾಡಿದ್ದ ಟೀಕೆಯು ಅವರ ಮತ್ತು ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ನಡುವೆ ವಾಗ್ಯುದ್ಧಕ್ಕೆ ಕಾರಣವಾಗಿತ್ತು. ‘ಚೌಹಾಣ್ ನೆಹರು ಅವರ ಕಾಲಿನ ಧೂಳಿಗೂ ಸಮಾನರಲ್ಲ,ಹೀಗೆ ಹೇಳಲು ಅವರಿಗೆ ನಾಚಿಕೆಯಾಗಬೇಕು ’ ಎಂದು ದಿಗ್ವಿಜಯ ಕಿಡಿಕಾರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News