ಸಂಚಾರ ನಿಯಮ ಉಲ್ಲಂಘನೆ: 15ಕ್ಕೂ ಹೆಚ್ಚು ಬಸ್ ಗಳ ಕರ್ಕಶ ಶಬ್ದದ ಹಾರ್ನ್ ಗಳು ವಶಕ್ಕೆ

Update: 2019-08-20 06:34 GMT

ಮಂಗಳೂರು, ಆ.20: ನಗರದಲ್ಲಿ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸುವ ಉದ್ದೇಶದಿಂದ ಕಾರ್ಯಾಚರಣೆ ಕೈಗೊಂಡ ಪಾಂಡೇಶ್ವರ ನಗರ ಸಂಚಾರ ಪೊಲೀಸರು ಸರಕಾರಿ ಬಸ್ ಸಹಿತ 15ಕ್ಕೂ ಅಧಿಕ ಖಾಸಗಿ ಬಸ್ ಗಳ ಮೇಲೆ ಶಬ್ದ ಮಾಲಿನ್ಯದ ಪ್ರಕರಣ ದಾಖಲಿಸಿ ಹಾರ್ನ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ನಗರದಲ್ಲಿನ ಆರ್ ಟಿಒ ಬಳಿಯಲ್ಲಿ ಮಂಗಳವಾರ ಬೆಳಗ್ಗೆ ಕಾರ್ಯಾಚರಣೆ ನಡೆಸಿದ ಸಂಚಾರ ಪೊಲೀಸರು ಸುಮಾರು 70 ಕ್ಕೂ ಅಧಿಕ ಬಸ್ ಗಳನ್ನು ತಪಾಸಣೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ಕಶ ಶಬ್ದಗಳಿಂದ ಶಬ್ದಮಾಲಿನ್ಯವನ್ನು ಉಂಟುಮಾಡುವ ಸುಮಾರು 15ಕ್ಕೂ ಹೆಚ್ಚು ಬಸ್ ಗಳ ಹಾರ್ನ್ ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News