ಅಮಾಯಕನಿಗೆ ಭಯೋತ್ಪಾದಕ ಪಟ್ಟ: ಮಾಧ್ಯಮಗಳ ವಿರುದ್ಧ ಸೂಕ್ತ ತನಿಖೆಗೆ ಎಸ್ಕೆಎಸ್ಸೆಸ್ಸೆಫ್ ಉಡುಪಿ ಜಿಲ್ಲೆ ಆಗ್ರಹ

Update: 2019-08-20 14:26 GMT

ಉಡುಪಿ: ಬೆಳ್ತಂಗಡಿಯ ರವೂಫ್ ಎಂಬ ಅಮಾಯಕನಿಗೆ ಭಯೋತ್ಪಾದಕ ಪಟ್ಟ ಕಟ್ಟಿದ ಮಾಧ್ಯಮಗಳ ಹಿಂದಿರುವ ಭಯೋತ್ಪಾದಕ ತಂತ್ರವನ್ನು ಬಯಳಿಗೆಳೆಯಬೇಕಿದೆ ಎಂದು ಎಸ್ಕೆಎಸ್ಸೆಸ್ಸೆಫ್ ಉಡುಪಿ ಜಿಲ್ಲಾಧ್ಯಕ್ಷ ಆಸಿಫ್ ಹನ್ನಾನ್ ಒತ್ತಾಯಿಸಿದ್ದಾರೆ.

ರಾಜ್ಯದ ಸುರಕ್ಷೆಗೆ ಮಾರಕವಾಗುವ ಬೇಜವಾಬ್ದಾರಿ ನಡೆಯ ಕುರಿತು ಕುಲಂಕುಷವಾದ ತನಿಖೆಯು ರಾಜ್ಯದ ಸುರಕ್ಷೆಗೆ ತುರ್ತು ಅಗತ್ಯವಾಗಿದೆ. ಅಮಾಯಕ ರವೂಫ್  ರನ್ನು ಭಯೋತ್ಪಾದಕನನ್ನಾಗಿ ಚಿತ್ರೀಕರಿಸಿದ ಮಾಧ್ಯಮಗಳು ಇನ್ನಾದರೂ ಸ್ಪಷ್ಟೀಕರಣ ನೀಡಿ ಅವರ ಕುಟುಂಬದ ಕ್ಷಮೆ ಕೇಳಬೇಕೆಂದು ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News