ರಿಕ್ಷಾ ಚಾಲಕ ಆತ್ಮಹತ್ಯೆ
Update: 2019-08-20 16:38 GMT
ಬೈಂದೂರು, ಆ.20: ವೈಯಕ್ತಿಕ ಕಾರಣದಿಂದ ಮನನೊಂದ ರಿಕ್ಷಾ ಚಾಲಕ ರೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಆ.19ರಂದು ಬೆಳಗ್ಗೆ ಕೆರ್ಗಾಲ್ ಗ್ರಾಮದ ನಾಯ್ಕನಕಟ್ಟೆ ಎಂಬಲ್ಲಿ ನಡೆದಿದೆ.
ಮೃತರನ್ನು ನಾಯ್ಕನಕಟ್ಟೆ ಚಿತ್ರಬೆಟ್ಟುವಿನ ಚನ್ನ ಪೂಜಾರಿ ಎಂಬವರ ಮಗ ಮಂಜುನಾಥ ಪೂಜಾರಿ (43) ಎಂದು ಗುರುತಿಸಲಾಗಿದೆ. ಇವರು ಮನೆಯ ಬಳಿ ರಿಕ್ಷಾವನ್ನು ತೊಳೆದು ರಿಕ್ಷಾದಲ್ಲಿ ಮೊಬೈಲ್, ರಿಕ್ಷಾದ ಚಾವಿ, ಪರ್ಸ್ ಇಟ್ಟು ನಾಪತ್ತೆಯಾಗಿದ್ದರು. ಅಲ್ಲಿಂದ ಹೋದ ಅವರು ಮನೆಯ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.