ಅಮಾಯಕರಾದ ರವೂಫ್ ಮುಸ್ಲಿಯಾರ್ ಗೆ ನ್ಯಾಯ ಸಿಗಲಿ: ಎಸ್ ವೈ ಎಸ್ ದ.ಕ. ಜಿಲ್ಲೆ

Update: 2019-08-20 17:04 GMT

ಮಂಗಳೂರು : ಬೆಳ್ತಂಗಡಿಯ ಜಾರಿಗೆಬೈಲು ನಿವಾಸಿ ಅಮಾಯಕ ರವೂಫ್ ಮುಸ್ಲಿಯಾರ್ ಮೇಲೆ ಭಯೋತ್ಪಾದನೆಯ ಸುಳ್ಳು ಅರೋಪ ಮಾಡುವ ಅವರನ್ನು ತೇಜೋವಧೆಗೈದ ಮಾಧ್ಯಮವರ್ಗದ ನಿಲುವು ಖಂಡನೀಯವಾಗಿದೆ ಎಂದು ದ.ಕ. ಜಿಲ್ಲಾ ಎಸ್ ವೈ ಎಸ್ ತಿಳಿಸಿದೆ.

ಮಾದ್ಯಮವರ್ಗದ ಈ ಕೌರ್ಯವನ್ನು ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಖಂಡಿಸುತ್ತಿದ್ದು, ನೈಜ ಅಪರಾಧಿಗಳಾದ ಮಾಧ್ಯಮಗಳ ವಿರುದ್ಧ ಸರಕಾರವು ಕಾನೂನು ಕ್ರಮ ಕೈಗೊಳ್ಳುವ ಮೂಲಕ ನಿರಪರಾಧಿಗೆ ನ್ಯಾಯ ಸಿಗುವಂತಾಗಬೇಕೆಂದು ಅದು ಒತ್ತಾಯ ಪಡಿಸುತ್ತಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಪ್ ಕಿನಾರ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News