ನೀರಿಗೆ ಬಿದ್ದು ಆಟೋ ಚಾಲಕ ಸಾವು

Update: 2019-08-20 18:34 GMT

ಮಂಗಳೂರು, ಆ.20: ನಗರದ ಹೊರವಲಯದ ಕುಲಶೇಖರ ಚೌಕಿ ನಿವಾಸಿ ಆಟೋ ಚಾಲಕ ವಿನ್ಸೆಂಟ್ ಬ್ರಾಗ್ಸ್ (56) ಕೆರೆಗೆ ಬಿದ್ದು ನೀರಿಗೆ ಬಿದ್ದು ಮೃತಪಟ್ಟಿದ್ದಾರೆ.

ವಿನ್ಸೆಂಟ್ ಅವರು ಆಟೋದೊಂದಿಗೆ ಸೋಮವಾರ ರಾತ್ರಿ ಮನೆಯಿಂದ ಹೊರ ಹೋಗಿದ್ದರು. ಮನೆಯಿಂದ ಒಂದಷ್ಟು ದೂರದ ಕಾನಡ್ಕ ಎಂಬಲ್ಲಿ ರಿಕ್ಷಾ ಪಾರ್ಕ್ ಮಾಡಿರುವುದು ಮಂಗಳವಾರ ಗಮನಕ್ಕೆ ಬಂದಿದೆ. ಅಲ್ಲಿಯೇ ಇರುವ ಕೆರೆಯಲ್ಲಿ ಅವರ ಶವ ಪತ್ತೆಯಾಗಿದೆ ಎಂದು ಮೃತರ ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.

ಕಂಕನಾಡಿ ನಗರ ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ನಡೆಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ವೆನ್ಲಾಕ್ ಆಸ್ಪತ್ರೆಗೆ ಕರೆ ತಂದಿದ್ದಾರೆ. ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News