ಎಸ್ಕೆಎಸ್ಸೆಸೆಫ್ ಕೈಕಂಬ ವಲಯ :ಫ್ರಿಡಂ ಸ್ಕ್ವಾರ್ ಕಾರ್ಯಕ್ರಮ

Update: 2019-08-21 05:48 GMT

ಅಡ್ಡೂರ್: ಎಸ್ಕೆಎಸ್ಸೆಸೆಫ್ ಕೈಕಂಬ ವಲಯ ಆಶ್ರಯದಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆ  ಅಂಗವಾಗಿ  ಫ್ರಿಡಂ ಸ್ಕ್ವಾರ್ 2019   ಕಾರ್ಯಕ್ರಮ ಎಸ್ಕೆಎಸ್ಸೆಸೆಫ್ ಕೈಕಂಬ ವಲಯ ಅಧ್ಯಕ್ಷ ಟಿ.ಪಿ. ಜಮಾಲುದ್ದೀನ್ ದಾರಿಮಿ ಅಧ್ಯಕ್ಷತೆಯಲ್ಲಿ ಅಡ್ಡೂರು ಕೇಂದ್ರ ಬದ್ರಿಯಾ‌  ಮ‌ದ್ರ‌ಸ‌ ಸಭಾಂಗಣದಲ್ಲಿ ನಡೆಯಿತು.

ಉಳ್ಳಾಲ ಸಯ್ಯದ್ ಮದನಿ ಅರೇಬಿಕ್ ಕಾಲೇಜ್ ಪ್ರೊ. ಶರೀಫ್ ಅರ್ಷಾದಿ ದುವಾಶೀರ್ವಚನ ನೆರವೇರಿಸಿದರು. ದ.ಕ ಜಿಲ್ಲಾ ಪಂ. ಕೃಷಿ ಮತ್ತು ಕೈಗಾರಿಕ ಸ್ಥಾಯಿ ಸಮಿತಿ ಅಧ್ಯಕ್ಷ ಹಾಗು ಜಿ.ಪಂ ಸದಸ್ಯ ಯು ಪಿ ಇಬ್ರಾಹಿಂ ಉದ್ಘಾಟಿಸಿ, ಯುವ ಜನತೆ  ಎಸ್ಕೆಎಸ್ಸೆಸೆಫ್ ನಂತಹ ಉತ್ತಮ ಸಂಘಟನೆಯೊಂದಿಗೆ ಕೈ ಜೋಡಿಸಿ ಸಮಾಜಮುಕಿ ಕಾರ್ಯ ಚಟುವಟಿಕೆ ಮಾಡಬೇಕೆಂದು ಕರೆ ನೀಡಿದರು. ಬಳಿಕ ಮಾತನಾಡಿದ ಎಸ್ಕೆಎಸ್ಸೆಸೆಫ್  ದ.ಕ ಜಿಲ್ಲಾ ಸಂಘಟನಾ  ಕಾರ್ಯದರ್ಶಿ ಪಿ.ಎ.ಮರ್ಧಾಳ ದಾರಿಮಿ, ಬಜ್ಪೆ ಪೊಲೀಸ್ ಠಾಣೆ ಪಿಸಿ ಮಂಜುನಾಥ್ ಮಾತನಾಡಿದರು.

ವೇದಿಕೆಯಲ್ಲಿ ಫ್ರಿಡಂ ಸ್ಕ್ವಾರ್  ಉಸ್ತಾವರಿ ಸಮಿತಿ ನಿರ್ದೇಶಕರು ಎಂ.ಎಚ್ ಮೊಹಿಯುದ್ದೀನ್ ಹಾಜಿ ಅಡ್ಡೂರ್, ಅಡ್ಡೂರ್ ನಾಗರಿಕ ಸುಬಾಶ್, ಬಯಾಲ್ ಅರೇಬಿಕ್ ಕಾಲೇಜ  ಪ್ರಿನ್ಸಿಪಾಲ್ ಅಶ್ರಫ್ ಅಶ್ರಫಿ,ಉಬೈದುಲ್ಲಾ  ಫೈಝಿ ಇರ್ಫಾನಿ, ಅಹ್ಮದ್ ಬಾವ ಅಡ್ಡೂರ್, ನೌಶಾದ್ ಹಾಜಿ, ಹಾಜಿ ಎ ಎಸ್ ಬಾವಾ ಸಾಗರ್, ಚೈರ್ಮೆನ್ ಬಶೀರ್ ಸಾಗರ್, ವೈಸ್ ಚೈರ್ಮೆನ್ ಅಹ್ಮದ್ ಬಾವ ಟಿಬೆಟ್, ಕೋಶಾಧಿಕಾರಿ ಸಮೀರ್ ಅಡ್ಡೂರ್ , ಮುಸ್ತಫಾ ಸೈಟ್, ಷರೀಫ್ ಮಳಲಿ, ಸಿರಾಜ್ ಬಡಕಬೈಲ್, ಅಬ್ಬಾಸ್  ನಡಾಜೆ, ದಾವೂದ್ ಸೈಟ್, ಅಬ್ದುಲ್ ಜಬ್ಬಾರ್ ಕಳಸಗುರಿ, ಎ.ಕೆ.ಅಶ್ರ‌ಫ್, ಎ.ಕೆ.ಮುಹಮ್ಮದ್ ಹಾರಿಸ್, ಡಿ. ಎಸ್. ರ‌ಫೀಕ್, ಆರೀಫ್ ಕಮ್ಮಾಜೆ ಸ್ವಾಗತಿಸಿ,  ಅಕ್ಬರ್ ಅಡ್ಡೂರ್ ವಂದಿಸಿದರು. ಇರ್ಫಾನ್ ಮುಸ್ಲಿಯಾರ್ ಕಾರ್ಯಕ್ರಮ  ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News