ದಿಲ್ಲಿ ವಿವಿ ಕ್ಯಾಂಪಸ್ ನಲ್ಲಿ ಸ್ಥಾಪಿಸಲಾಗಿದ್ದ ಸಾವರ್ಕರ್ ಪ್ರತಿಮೆ ತೆರವು

Update: 2019-08-24 13:20 GMT
Photo: indianexpress.com

ಹೊಸದಿಲ್ಲಿ, ಆ.24: ಇತ್ತೀಚೆಗೆ ದಿಲ್ಲಿ ವಿಶ್ವವಿದ್ಯಾಲಯದ ಕಲಾ ವಿಭಾಗದ ಗೇಟಿನ ಹೊರಗೆ ಸ್ಥಾಪಿಸಲಾಗಿದ್ದ ಸಾವರ್ಕರ್, ಭಗತ್ ಸಿಂಗ್ ಹಾಗೂ ಸುಭಾಶ್ ಚಂದ್ರ ಬೋಸ್ ಅವರ ಪುತ್ಥಳಿಗಳನ್ನು ಎಬಿವಿಪಿ ನೇತೃತ್ವದ ದಿಲ್ಲಿ ವಿವಿ ವಿದ್ಯಾರ್ಥಿ ಯೂನಿಯನ್ ತೆಗೆದು ಹಾಕಿದೆ.

ವಿದ್ಯಾರ್ಥಿ ಯೂನಿಯನ್ ಚುನಾವಣೆ ನಂತರ ನಿಯಮಾವಳಿಗಳಂತೆ ಈ ಪುತ್ಥಳಿಗಳನ್ನು ಮರು ಸ್ಥಾಪಿಸಲಾಗುವುದೆಂದು ವಿವಿ ಆಡಳಿತ ಆಶ್ವಾಸನೆ ನೀಡಿದೆ ಎಂದು ಎಬಿವಿಪಿ ಹೇಳಿದೆ.

ವಿವಿ ಆಡಳಿತದ ಅನುಮತಿಯಿಲ್ಲದೆ ದಿಲ್ಲಿ ವಿವಿ ವಿದ್ಯಾರ್ಥಿ ಯೂನಿಯನ್‍ನ ನಿರ್ಗಮನ ಅಧ್ಯಕ್ಷ ಶಕ್ತಿ ಸಿಂಗ್  ಇತ್ತೀಚೆಗೆ ಈ ಪುತ್ಥಳಿಗಳನ್ನು ಅಳವಡಿಸಿದ್ದರು. ಇದೀಗ ಅವುಗಳನ್ನು ಸುರಕ್ಷಿತ ಸ್ಥಳದಲ್ಲಿ ಇರಿಸಲಾಗಿದೆ ಎಂದು  ಯೂನಿಯನ್ ಹೇಳಿದೆ.

ಸಾವರ್ಕರ್ ಅವರ ಪುತ್ಥಳಿಗೆ ಮಸಿ ಬಳಿದ  ಎನ್‍ಎಸ್‍ಯುಐ ಸಂಯೋಜಿತ ವಿದ್ಯಾರ್ಥಿ ಯೂನಿಯನ್  ವಿರುದ್ಧ ಕ್ರಮ ಕೈಗೊಳ್ಳಬೇಕೆಂದು  ಎಬಿವಿಪಿ ನೇತೃತ್ವದ ಯೂನಿಯನ್ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News