ತ್ರಿರಾಷ್ಟ್ರ ಪ್ರವಾಸ ಮೊಟಕು ಮಾಡಬೇಡಿ: ಮೋದಿಗೆ ಜೇಟ್ಲಿ ಕುಟುಂಬಸ್ಥರ ಮನವಿ

Update: 2019-08-24 14:45 GMT

   ಹೊಸದಿಲ್ಲಿ,ಆ.24: ಅಧಿಕೃತ ಭೇಟಿಗಾಗಿ ಶನಿವಾರ ಯುಎಇಯಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ದಿಲ್ಲಿಯ ಏಮ್ಸ್‌ನಲ್ಲಿ ನಿಧನರಾದ ಹಿರಿಯ ಬಿಜೆಪಿ ನಾಯಕ ಹಾಗೂ ಮಾಜಿ ಕೇಂದ್ರಸಚಿವ ಅರುಣ್ ಜೇಟ್ಲಿ ಅವರ ಕುಟುಂಬಸ್ಥರಿಗೆ ದೂರವಾಣಿ ಕರೆಯನ್ನು ಮಾಡಿ ಸಂತಾಪಗಳನ್ನು ವ್ಯಕ್ತಪಡಿಸಿದ್ದಾರೆ. ಈ ಸಂದರ್ಭ,ವಿದೇಶಗಳಲ್ಲಿ ಮಹತ್ವದ ಕಾರ್ಯಕ್ರಮಗಳನ್ನು ಮೊಟಕು ಮಾಡದಂತೆ ಜೇಟ್ಲಿ ಕುಟುಂಬಸ್ಥರು ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

ಜೇಟ್ಲಿಯವರ ಅಂತ್ಯಸಂಸ್ಕಾರ ರವಿವಾರ ನಡೆಯಲಿದೆ.

ಮೋದಿ ಫ್ರಾನ್ಸ್,ಯುಎಇ ಮತ್ತು ಬೆಹರಿನ್‌ಗಳ ಪ್ರವಾಸದಲ್ಲಿದ್ದಾರೆ. ಬೆಹರಿನ್‌ಗೆ ಅವರ ಭೇಟಿಯು ಮಹತ್ವವನ್ನು ಪಡೆದುಕೊಂಡಿದೆ. ಆ ರಾಷ್ಟ್ರಕ್ಕೆ ಭಾರತದ ಪ್ರಧಾನಿಯೋರ್ವರು ಭೇಟಿ ನೀಡುತ್ತಿರುವುದು ಇದೇ ಪ್ರಥಮವಾಗಿದೆ.

ಜೇಟ್ಲಿ ನಿಧನದಿಂದಾಗಿ ಮೋದಿ ತನ್ನ ಪ್ರವಾಸವನ್ನು ಮೊಟಕುಗೊಳಿಸಿ ಸ್ವದೇಶಕ್ಕೆ ವಾಪಸಾಗುತ್ತಿದ್ದಾರೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ ಜೇಟ್ಲಿ ಕುಟುಂಬಸ್ಥರು,‘ ದೇಶ ಮೊದಲು. ಹೀಗಾಗಿ ನೀವು ನಿಮ್ಮ ಮಹತ್ವದ ಕಾರ್ಯಕ್ರಮಗಳನ್ನು ಮುಗಿಸಿಕೊಂಡೇ ಬನ್ನಿ ಎಂದು ಅವರನ್ನು ಕೋರಿಕೊಂಡಿದ್ದಾರೆ ’ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News