ಮಂಗಳೂರು: ‘ಐಡೆಕೊರ್’ ಫರ್ನಿಶಿಂಗ್ ಮಳಿಗೆ ಶುಭಾರಂಭ

Update: 2019-08-25 05:58 GMT

ಮಂಗಳೂರು, ಆ. 25: ನಗರದ ಕಂಕನಾಡಿಯ ಫಳ್ನೀರ್ ರಸ್ತೆಯ ಅದೊನೈ ಟವರ್ಸ್‌ನ ಸಂಕೀರ್ಣದಲ್ಲಿ ಇಂದು 'ಐಡೆಕೊರ್‌' ಫರ್ನಿಶಿಂಗ್ ಮಳಿಗೆಯನ್ನು ಮಂಗಳೂರಿನ ವಿಶ್ವಾಸ್ ಬಾವ ಬಿಲ್ಡರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಅಬ್ದುಲ್ ರವೂಫ್ ಪುತ್ತಿಗೆ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು, ಶುಭ ಹಾರೈಸಿದ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಮುಹಮ್ಮದ್ ನಝೀರ್, ಇಂಟೀರಿಯರ್ ಡೆಕೋರೇಶನ್ ಜನಸಾಮಾನ್ಯರ ಇಂದಿನ ಬಹು ಮುಖ್ಯ ಬೇಡಿಕೆಯಾಗಿದ್ದು, ಸಾಕಷ್ಟು ಉದ್ಯೋಗಾವಕಾಶ ಲಭ್ಯವಿದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೆನರಾ ವಾಣಿಜ್ಯ ಮತ್ತು ಕೈಗಾರಿಕೆಗಳ ಸಂಘದ ಅಧ್ಯಕ್ಷ ಪಿ.ಬಿ. ಅಬ್ದುಲ್ ಹಮೀದ್, ಬ್ಯಾರೀಸ್ ವಾಣಿಜ್ಯ ಮತ್ತು ಕೈಗಾರಿಕೆಗಳ ಸಂಘದ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಆಳ್ವ ಆ್ಯಂಡ್ ಅಸೋಸಿಯೇಟ್ಸ್‌ನ ವಿನ್ಯಾಸಕಾರ ಸುಪ್ರಿತ್ ಆಳ್ವ, ಹಿದಾಯ ಫೌಂಡೇಶನ್ ಚೇರ್‌ಮನ್ ಮನ್ಸೂರ್ ಅಹ್ಮದ್ ಆಝಾದ್, ಇಂಡಿಯನ್ ಡಿಸೈನ್ ಸ್ಕೂಲ್‌ನ ಚೇರ್‌ಮನ್ ಎ.ಆರ್.ಮುಹಮ್ಮದ್ ನಿಸ್ಸಾರ್, ಶಾಲಿಮಾರ್ ರಿಯಾಲ್ಟಿ ಹೋಲ್ಡಿಂಗ್ಸ್‌ನ ಬಶೀರ್ ಅಹ್ಮದ್ ವೊದಲಾದವರು ಶುಭ ಹಾರೈಸಿದರು.

ಕೆಎಸ್‌ಎ ಮತ್ತು ಬಹ್ರೇನ್‌ನ ಟ್ರೈಡೆಂಟ್ ಗ್ರೂಪ್‌ನ ಝೈನುಲ್ ಅಬಿದ್, ಥೀಮ್ ಇಂಟೀರಿಯರ್ಸ್‌ನ ಎ.ಎಚ್. ಶಾನವಾಝ್, ಅಡ್ಡೂರಿನ ಎಸ್.ಕ್ಯೂ. ಅಸೋಸಿಯೇಟ್ಸ್‌ನ ಮುಸ್ತಫಾ ಡಮ್ಮಲ, ಮೂಲರಪಟ್ನ ಮುತ್ತೂರು ಎಂಟರ್‌ಪ್ರೈಸಸ್‌ನ ಬಶೀರ್ ಹಸನ್ ವರತಿಲ್, ಹೈದರ್ ಪರ್ತಿಪ್ಪಾಡಿ, ಶರೀಫ್ ಮೊದಲಾದವರು ಭಾಗವಹಿಸಿದ್ದರು.

ಮಳಿಗೆಯಲ್ಲಿ ಪ್ರತಿಷ್ಠಿತ ಬ್ರ್ಯಾಂಡ್ ಗಳಾದ ಡಿಡೆಕೊರ್, ಕರ್ಲ್-ಆನ್‌ನ ಉತ್ಪನ್ನಗಳಾದ ಕರ್ಟನ್, ಅಪ್ ಹೊಲ್ಸ್ಟ್ರಿ, ವಾಲ್‌ಪೇಪರ್ ಸೇರಿದಂತೆ ಗೃಹೋಪಯೋಗಿ ಹಾಗು ಆಲಂಕಾರಿಕ ಉತ್ಪನ್ನಗಳ ವಿಭಿನ್ನ ಹಾಗೂ ವಿಶಾಲ ಸಂಗ್ರಹ ಇಲ್ಲಿ ಲಭ್ಯ ಎಂದು ಪಾಲುದಾರರಾದ ನಝೀರ್ ಹುಸೈನ್ ಹಾಗು ಎಸ್. ಶಾಹಿಕ್ ಬಶೀರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News