ಕಾಪು : ಎಸ್‌ವೈಎಸ್ ಸದಸ್ಯತ್ವ ಅಭಿಯಾನ

Update: 2019-08-25 12:52 GMT

ಕಾಪು, ಆ.25: ಎಸ್‌ವೈಎಸ್ ಉಚ್ಚಿಲ ಶಾಖೆಯ ವತಿಯಿಂದ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ರವಿವಾರ ಮುಳ್ಳಗುಡ್ಡೆಯ ಹಾಜಿ ಸಾಹೇಬರ ಮನೆ ವಠಾರದಲ್ಲಿ ಜರಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ವೈಎಸ್ ಉಚ್ಚಿಲ ಅಧ್ಯಕ್ಷ ಹಾಜಿ ಅಬ್ಬುಲ್ ಹಮೀದ್ ವಹಿಸಿದ್ದರು. ಎಸ್‌ವೈಎಸ್ ರಾಜ್ಯ ಸದಸ್ಯ ಇದ್ದಿನಬ್ಬ ತರೀಕೆರೆ ಮುಖ್ಯ ಅತಿಥಿಯಾಗಿದ್ದರು. ಎಸ್‌ವೈಎಸ್ ಉಪಾಧ್ಯಕ್ಷ ಶಬ್ಬೀರ್ ಇಸ್ಮಾಹಿಲ್, ಕೋಶಾಧಿಕಾರಿ ಪಿ.ಪಿ.ಅಬ್ದುಲ್ ಕರೀಮ್ ಪೊಲ್ಯ, ಗುತ್ತಿಗೆದಾರ ರಹೀಮ್ ಎಚ್.ಆರ್., ಇಬ್ರಾಹಿಮ್ ತವಕ್ಕಲ್, ಮೂಸಾಕ, ಅಯೂಬ್, ಕೆ.ಎಚ್.ಇಬ್ರಾಹಿಂ ಮೊದಲಾದವರು ಉಪಸ್ಥಿತರಿದ್ದರು.

 ಎಸ್ಸಸ್ಸೆಫ್ ಜಿಲ್ಲಾಧ್ಯಕ್ಷ ಶಬ್ಬೀರ್ ಸಖಾಫಿ ಸ್ವಾಗತಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News