ಸ್ವಚ್ಛ ಮಂಗಳೂರು ಅಭಿಯಾನದ ಐದನೆ ಹಂತದ ಶ್ರಮದಾನ
Update: 2019-08-25 12:55 GMT
ಮಂಗಳೂರು, ಆ.25: ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ ನಡೆಯುವ ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಅಭಿಯಾನದ 5ನೇ ವರ್ಷದ 38ನೇ ಸ್ವಚ್ಛತಾ ಶ್ರಮದಾನವನ್ನು ಕಾವೂರಿನಲ್ಲಿ ರವಿವಾರ ಜರುಗಿತು.
ಕಾವೂರು ಗಾಂಧಿನಗರದ ಬಿ.ಜಿ.ಎಸ್ ವಿದ್ಯಾಸಂಸ್ಥೆಯ ಬಳಿ ಶ್ರಮದಾನಕ್ಕೆ ಚಾಲನೆ ನೀಡಲಾಯಿುತು. ಕಾವೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಮನೋಜ್ ಲೂಯಿಸ್, ರೇಖಾ ಎಸ್ಎನ್ ಜಂಟಿಯಾಗಿ ಶ್ರಮದಾನಕ್ಕೆ ಹಸಿರು ನಿಶಾನೆ ತೋರಿದರು. ರಂಜನ್ ಬೆಳ್ಳರ್ಪಾಡಿ, ಉಪನ್ಯಾಸಕಿ ಮೋನಿ ಎಚ್.ಕೆ, ಸುಜಿತ್ ಭಂಡಾರಿ, ಗುರುದತ್ತ ಶೆಣೈ, ಸ್ವಪ್ನಿಲ್ ಚೌಟ, ಶರಣ, ಧನುಶ್ ಡಿ.ಬಿ., ಪ್ರವೀಣ ಶೆಟ್ಟಿ, ಸುಧಾಕರ್ ಕಾವೂರು, ಅಭಿಯಾನದ ಪ್ರಧಾನ ಸಂಯೋಜಕ ಉಮಾನಾಥ್ ಕೋಟೆಕಾರ್ ಹಾಗೂ ಸಚಿನ್ ಕಾವೂರು, ಹರೀಶ್ ಪ್ರಭು, ಕೋಡಂಗೆ ಬಾಲಕೃಷ್ಣ ನಾಕ್, ಮಹೇಶ್ ಡಿ, ಪುನೀತ್ ಪೂಜಾರಿ ಮತ್ತಿತರರು ಪಾಲ್ಗೊಂಡಿದ್ದರು.