ಆ.30ರಂದು ನಾದವೈಭವಂ ಸ್ಥಾಪನಾ ದಿನಾಚರಣೆ

Update: 2019-08-25 16:07 GMT

ಉಡುಪಿ, ಆ.25: ಉಡುಪಿಯ ನಾದವೈಭವಂ ಸಂಗೀತ-ಶಿಕ್ಷಣ- ಸಂಶೋಧನಾ ಸಂಸ್ಥೆಯ 39ನೇ ಸಂಸ್ಥಾಪನಾ ದಿನಾಚರಣೆ ಮತ್ತು ಗುರು ವಂದನಾ ಕಾರ್ಯಕ್ರಮವು ಆ.30ರಂದು ಸಂಜೆ 4.30ಕ್ಕೆ ಉಡುಪಿ ಕಡಿಯಾಳಿ ಕಾತ್ಯಾಯಿನಿ ಮಂಟಪದಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ನ್ಯಾಯವಾದಿ ಕುಂದಾಪುರದ ಎ.ಎಸ್.ಎನ್.ಹೆಬ್ಬಾರ್ ಉದ್ಘಾಟಿಸಲಿರುವರು. ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಕು.ಗೋ ವಹಿಸಲಿರು ವರು. ಹಿರಿಯ ಸಾಹಿತಿ ಮತ್ತು ಸಂಶೋಧಕ ಅಂಬ್ರಾಯ ಮಠ ಅವರಿಗೆ ನಾದ ವೈಭವಂ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಸ್ಥಾಪಕ- ನಿರ್ದೇಶಕ ಉಡುಪಿ ವಾಸುದೇವ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News