ಮಂಗಳೂರು: ಎರಡು ಬೈಕ್ ಕಳವು

Update: 2019-08-25 16:27 GMT

ಮಂಗಳೂರು, ಆ.25: ನಗರದ ಬಲ್ಮಠ ರಸ್ತೆಯ ಅಂಗಡಿಯೊಂದರ ಬಳಿ ಪಾರ್ಕ್ ಮಾಡಲಾದ ಸ್ಕೂಟರ್ ಹಾಗೂ ವೆಸ್ಟ್‌ಕೋಸ್ಟ್ ರಸ್ತೆಯ ಬಳಿಯ ಮನೆಯ ಆವರಣದಲ್ಲಿ ನಿಲ್ಲಿಸಲಾದ ಬೈಕೊಂದು ಕಳವಾಗಿರುವ ಬಗ್ಗೆ ಬಂದರು, ಕಂಕನಾಡಿ ನಗರ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಾಗಿದೆ.

ಮಂಜೇಶ್ವರ ನಿವಾಸಿ ಶ್ರೀಧರ್ ಪೈ ಎಂಬವರು ಸ್ಕೂಟರ್‌ನ್ನು ಪಾರ್ಕ್ ಮಾಡಿ ಕೆಲಸದ ನಿಮಿತ್ತ ಮೊಬೈಲ್ ಶಾಪ್‌ಗೆ ತೆರಳಿದ್ದರು. ವಾಪಸಾದಾಗ ಸ್ಕೂಟರ್ ನಾಪತ್ತೆಯಾಗಿದ್ದು, ಎಲ್ಲಿ ಹುಡುಕಾಡಿದರೂ ಸ್ಕೂಟರ್ ಪತ್ತೆಯಾಗಿಲ್ಲ. ಸ್ಕೂಟರ್ ಮೌಲ್ಯ 49 ಸಾವಿರ ರೂ. ಎಂದು ತಿಳಿದು ಬಂದಿದೆ.

ಭರತ್ ಕುಮಾರ್ ಎಂಬವರು ನಗರದ ವೆಸ್ಟ್‌ಕೋಸ್ಟ್ ರಸ್ತೆಯ ಬಳಿಯಿರುವ ತಮ್ಮ ಮನೆಯ ಆವರಣದಲ್ಲಿ ರಾತ್ರಿ ಬೈಕ್‌ನ್ನು ನಿಲ್ಲಿಸಿದ್ದರು. ಬೆಳಗೆದ್ದು ನೋಡಿದಾಗ ಬೈಕ್ ನಾಪತ್ತೆಯಾಗಿದ್ದು, ಎಲ್ಲಿ ಹುಡುಕಾಡಿದರೂ ಬೈಕ್ ಪತ್ತೆಯಾಗಿಲ್ಲ. ಬೈಕ್‌ನ ಮೌಲ್ಯ 25 ಸಾವಿರ ರೂ. ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News