ಕುಂಜಿಬೆಟ್ಟು: ಟಿ.ಎ. ಪೈ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಶಿಕ್ಷಕರ ದಿನಾಚರಣೆ
Update: 2019-09-06 04:41 GMT
ಉಡುಪಿ, ಸೆ.6: ಕುಂಜಿಬೆಟ್ಟುವಿನ ಟಿ.ಎ. ಪೈ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಜೈಂಟ್ಸ್ ಗ್ರೂಪ್ ಆಫ್ ಉಡುಪಿ ಮತ್ತು ಕುಂಜಿಬೆಟ್ಟುವಿನ ಇಎಂಎಚ್ ರಕ್ಷಕ-ಶಿಕ್ಷಕರ ಸಂಘದ ವತಿಯಿಂದ ಶಾಲಾ ಆವರಣದಲ್ಲಿ ಗುರುವಾರ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಗೋಪಾಲಕೃಷ್ಣ ರಾವ್ ಅವರನ್ನು ಸನ್ಮಾನಿಸಲಾಯಿತು.
ಜೈಂಟ್ಸ್ ವೆಲ್ಫೇರ್ ಫೌಂಡೇಶನ್ ಕೇಂದ್ರ ಸಮಿತಿಯ ಸದಸ್ಯ ದಿನಕರ್ ಕೆ. ಅಮೀನ್ ಮತ್ತು ಉಡುಪಿ ಸಮೂಹದ ಅಧ್ಯಕ್ಷ ಲಕ್ಷ್ಮೀಕಾಂತ್ ಬೆಸ್ಕೂರ್ ಈ ಸಂದರ್ಭದಲ್ಲಿ ಮಾತನಾಡಿದರು.
ಯುಶ್ ನಿರ್ದೇಶಕ ರಮೇಶ್ ಪೂಜಾರಿ, ಗಣೇಶ್ ಉರಲ್, ಇಕ್ಬಾಲ್ ಮನ್ನಾ ವಿ.ಪಿ., ರಾಜೇಶ್ ಶೆಟ್ಟಿ, ಜಗದೀಶ್ ಅಮೀನ್, ಉಷಾ ರಮೇಶ್ ಉಪಸ್ಥಿತರಿದ್ದರು.
ಪಿಟಿಎ ಅಧ್ಯಕ್ಷ, ಮುಖ್ಯ ಶಿಕ್ಷಕ ಅಶೋಕ್ ಕುಮಾರ್ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು.
ಶಾಲಾ ಶಿಕ್ಷಕರು ಗಣ್ಯರು ಮತ್ತು ಮಕ್ಕಳನ್ನು ಸ್ವಾಗತಿಸಿದರು.