ಕನ್ಯಾನ-ಗೋಳಿಕಟ್ಟೆ ಎಸ್.ವೈ.ಎಸ್. ರಚನೆ, ಮಹ್ಳರತುಲ್ ಬದ್ರಿಯ್ಯಾ ಕಾರ್ಯಕ್ರಮ

Update: 2019-09-09 05:21 GMT

ವಿಟ್ಲ : ಕರ್ನಾಟ ರಾಜ್ಯ ಸುನ್ನೀ ಯುವಜನ ಸಂಘ (ಎಸ್.ವೈ.ಎಸ್) ಇದರ ಗೋಳಿಕಟ್ಟೆ ನೂತನ ಬ್ರಾಂಚ್ ರಚನೆ ಹಾಗೂ ಎಸ್ಸೆಸ್ಸಫ್ ಗೋಳಿಕಟ್ಟೆ  ವತಿಯಿಂದ ಮಹ್ಳರತುಲ್ ಬದ್ರಿಯ್ಯಾ ಕಾರ್ಯಕ್ರಮವು ಗೋಳಿಕಟ್ಟೆಯಲ್ಲಿ ಇತ್ತೀಚೆಗೆ ನಡೆಯಿತು.

ಎಸ್ಸೆಸ್ಸಫ್ ಕನ್ಯಾನ ಸೆಕ್ಟರ್ ಅಧ್ಯಕ್ಷ ಎಂ.ಐ.ಎಂ. ಅಶ್ರಫ್ ಸಖಾಫಿ ಮಂಡ್ಯೂರು ನೇತೃತ್ವ ವಹಿಸಿದ್ದರು. ಕೆ.ಎಂ ಅಶ್ರಫ್ ಸಖಾಫಿ ಕುಕ್ಕಾಜೆ, ಎಂ.ಕೆ.ಎಂ ಕಾಮಿಲ್ ಸಖಾಫಿ, ಅಬ್ದುಲ್ ಹಮೀದ್ ಸಖಾಫಿ ಪಾಡಿ ಮತ್ತಿತರರು ಉಪಸ್ಥಿತರಿದ್ದರು.

ಇದೇ ವೇಳೆ ಎಸ್.ವೈ.ಎಸ್ ಗೋಳಿಕಟ್ಟೆ ಶಾಖೆ ರಚಿಸಲಾಯಿತು. ನೂತನ ಸಮಿತಿ ಪಾದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಮಹಮ್ಮದ್ ಹಾಜಿ ದರ್ಕಾಸ್ ಮಿಲ್ಲ್, ಉಪಾಧ್ಯಕ್ಷರಾಗಿ ಹಮೀದ್ ಹಾಜಿ ಪರಕ್ಕಜೆ, ಪ್ರಧಾನ ಕಾರ್ಯದರ್ಶಿಯಾಗಿ ಮಹಮ್ಮದ್ ಮಡಕುಂಜ ಗೋಳಿಕಟ್ಟೆ, ಕೋಶಾಧಿ ಕಾರಿಯಾಗಿ ಜಿ.ಕೆ. ಅಬ್ದುಲ್ಲ ಗೋಳಿಕಟ್ಟೆ, ದಅ್ ವಾ ಮತ್ತು ಎಜ್ಯುಕೇಶನಲ್ ಕಾರ್ಯದರ್ಶಿಯಾಗಿ ಹನೀಫ್ ನೆಕ್ಲಾಜೆ, ಹಿಸಾಬಾ ಕಾರ್ಯದರ್ಶಿಯಾಗಿ ಖಾದರ್ ಸಅದಿ ನೆಕ್ಲಾಜೆ ಇವರು ಆಯ್ಕೆಯಾದರು.

ಕಾರ್ಯಾಕಾರಿ ಸಮಿತಿ ಸದಸ್ಯರಾಗಿ ಸುಲೈಮಾನ್ ಪಾಲ್ತೋಡಿ, ಖಾಸಿಂ ಗೋಳಿಕಟ್ಟೆ , ಸಿದ್ದೀಕ್ ಮಡಕುಂಜ, ಇಸ್ಮಾಯಿಲ್ ಮರ್ತನಾಡಿ, ಜಮಾಲ್ ನೆಕ್ಲಾಜೆ, ಯಾಕುಬ್ ಮಡಕುಂಜ, ನೌಶಾದ್ ಗೋಳಿಕಟ್ಟೆ, ಶರೀಫ್ ಗೋಳಿಕಟ್ಟೆ , ಮಹಮ್ಮದ್ ಪೆರ್ನಡ್ಕ , ಕೆ‌‌.ಕೆ ಅಬ್ದುಲ್ ರಹ್ಮಾನ್ ಕುಕ್ಕಾಜೆ , ಖಾದರ್ ಕುಕ್ಕಾಜೆ, ಇಬ್ರಾಹಿಂ ಬಂಡಿತಡ್ಕ, ಇಬ್ರಾಹಿಂ ನೆಕ್ಲಾಜೆ, ಕೆ.ಎಂ. ಅಶ್ರಫ್ ಸಖಾಫಿ ಕುಕ್ಕಾಜೆ ಇವರನ್ನು ನೇಮಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News