ಅಲ್ ಮದೀನ ಮಂಜನಾಡಿ ರಾಷ್ಟ್ರೀಯ ಸಮಿತಿ ಅದೀನದಲ್ಲಿ ನೂತನ 'ದೀರ ಕಮಿಟಿ' ಅಸ್ಥಿತ್ವಕ್ಕೆ

Update: 2019-09-09 06:28 GMT

ಮಂಗಳೂರು: ಅಲ್ ಮದೀನ ಮಂಜನಾಡಿ ರಾಷ್ಟ್ರೀಯ ಸಮಿತಿ ಅದೀನದಲ್ಲಿ ನೂತನ 'ದೀರ ಕಮಿಟಿ' ಯನ್ನು ಇಬ್ರಾಹಿಂ ಮಂಜನಾಡಿ ನಿವಾಸದಲ್ಲಿ ರಚಿಸಲಾಯಿತು.

ಸಭೆಯಯ ಅಧ್ಯಕ್ಷತೆಯನ್ನು ಅಲ್ ಮದೀನ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಎನ್ ಎಸ್ ಅಬ್ದುಲ್ಲಾ ಹಾಜಿ ವಹಿಸಿದರು. ಅಲ್ ಮದೀನ ರಾಷ್ಟ್ರೀಯ ಸಮಿತಿಯ ಕೋಶಾಧಿಕಾರಿ ಅಬ್ದುರ್ರಹ್ಮಾನ್ ಮದನಿ ಮಂಜನಾಡಿ ಸ್ವಾಗತಿಸಿದರು. ಕೆ. ಸಿ.ಎಫ್ ರಿಯಾದ್ ಝೋನಲ್ ಅಧ್ಯಕ್ಷ ಫಾರೂಕ್ ಸಅದಿ ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಪ್ರಭಾಷಕರಾಗಿ ಕೆ. ಸಿ.ಎಫ್ ನೇಶನಲ್ ಕಮಿಟಿ ಆರ್ಗನೈಝರ್ ಚೇರ್ಮಾನ್ ಸಿದ್ದೀಕ್ ಸಖಾಫಿ ಪೆರುವಾಯಿ ಮಾತನಾಡಿ ಸ್ಥಾಪನೆಯ ಶಿಲ್ಪಿ ಅಬ್ಬಾಸ್ ಉಸ್ತಾದರ ಮದ್ಹ್ ಮಾಡಿದರು. ಸಭೆಯಲ್ಲಿ ಅನೇಕ ಉಲಮಾ ಹಾಗೂ ಗಣ್ಯರು ಉಪಸ್ಥಿತರಿದ್ದರು. ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

​ಅಧ್ಯಕ್ಷರಾಗಿ ಸುವೈಸ್ ಕಂದಕ್ ಮಂಗಳೂರು, ಪ್ರ. ಕಾರ್ಯದರ್ಶಿಯಾಗಿ ಅಶ್ರಫ್ ಮಂಜನಾಡಿ, ಕೋಶಾಧಿಕಾರಿಯಾಗಿ ಸತ್ತಾರ್ ತೊಕ್ಕೊಟ್ಟು ಆಯ್ಕೆಯಾದರು.

 ಅಶ್ರಫ್ ಮಂಜನಾಡಿ ಕಾರ್ಯಕ್ರಮ ನಿರೂಪಿಸಿದರು.

Writer - ವರದಿ : ಇಕ್ಬಾಲ್ ಮಲ್ಲೂರು

contributor

Editor - ವರದಿ : ಇಕ್ಬಾಲ್ ಮಲ್ಲೂರು

contributor

Similar News