ಪುತ್ತೂರು ಸಂತೆಕಟ್ಟೆ ಅಂಗನವಾಡಿ ಕೇಂದ್ರ ಉದ್ಘಾಟನೆ

Update: 2019-09-09 15:07 GMT

ಉಡುಪಿ, ಸೆ.9: ಸಂತೆಕಟ್ಟೆಯಲ್ಲಿರುವ ಉಡುಪಿ ನಗರಸಭೆಯ ಐಡಿಎಸ್ ಎಂಟಿ ವಾಣಿಜ್ಯ ಸಂಕಿರಣದ ತಳ ಮಹಡಿಯಲ್ಲಿ ಆರಂಭಿಸಲಾದ ಗೋಪಾಲ ಪುರ ವಾರ್ಡಿನ ಪುತ್ತೂರು ಸಂತೆಕಟ್ಟೆ ಅಂಗನವಾಡಿಯನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ಇಂದು ಉದ್ಘಾಟಿಸಿದರು.

 ಪುತ್ತೂರು ಸಂತೆಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಂಗನವಾಡಿಯನ್ನು ವಾಣಿಜ್ಯ ಸಂಕೀರ್ಣದ ಉದ್ದೇಶಕ್ಕಾಗಿ ತೆರವುಗೊಳಿಸಿ, ಅಂಗನವಾಡಿಗೆ ಪ್ರತ್ಯೇಕ ಸ್ಥಳವನ್ನು ನೀಡಲಾಗಿತ್ತು. ಈ ಜಾಗದ ವಿವಾದವು ನ್ಯಾಯಾಲಯದಲ್ಲಿ ಇರುವುದರಿಂದ ಅಂಗನವಾಡಿ ನಡೆಸಲು ತೊಂದರೆಯಾಗಿತ್ತು. ಆ ಹಿನ್ನೆಲೆ ಯಲ್ಲಿ ಐಡಿಎಸ್‌ಎಂಟಿ ಕಟ್ಟಡದ ನೆಲ ಮಹಡಿಯಲ್ಲಿ ತಾತ್ಕಾಲಿಕವಾಗಿ ಅಂಗನ ವಾಡಿಯನ್ನು ಆರಂಭಿಸಲಾಗಿದೆ.

ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಆನಂದ ಕಲ್ಲೋಳ್ಕಿರ್, ಸದಸ್ಯೆ ಮಂಜುಳಾ ವಿ.ನಾಯಕ್, ರೋಟರಿ ಸಂಸ್ಥೆಯ ಪ್ರಮುಖರಾದ ರಾಜಾರಾಮ್ ಭಟ್, ದಿನೇಶ್ ಪೈ ಸಂತೆಕಟ್ಟೆ, ಚಿನ್ಮಯ್ ಮೂರ್ತಿ ಸಂತೆಕಟ್ಟೆ ಮೊದಲಾದ ವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News