ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

Update: 2019-09-09 16:37 GMT

ಕಾರ್ಕಳ, ಆ.9: ಕಳೆದ ಒಂದು ವಾರದಿಂದ ನಾಪತ್ತೆಯಾಗಿದ್ದ ಕಾಂತಾವರ ಗ್ರಾಮದ ಬಾಬು ಆಚಾರ್ಯ(59) ಎಂಬವರ ಮೃತದೇಹವು ನಿಟ್ಟೆ ಗ್ರಾಮದ ಶಾಂಭವಿ ನದಿಯ ಅಟ್ಟೆಕಲ್ಲು ಎಂಬಲ್ಲಿ ಸೆ.9ರಂದು ಬೆಳಗ್ಗೆ  11ಗಂಟೆ ಸುಮಾರಿಗೆ ಪತ್ತೆಯಾಗಿದೆ.

ಸೆ.3ರಂದು ಮನೆಯಿಂದ ನಾಪತ್ತೆಯಾಗಿದ್ದ ಇವರು, ವಿಪರೀತ ಬೆನ್ನು ನೋವಿನ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆ ಹೊಂದಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇವರ ಮೃತದೇಹ ಶಾಂಭವಿ ನದಿಯ ಅಟ್ಟೆಕಲ್ಲು ಹೊಳೆ ದಂಡೆಯ ಬಳಿ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News