ಆಳ್ವಾಸ್ ಪ್ರಾಣಿಶಾಸ್ತ್ರ ವಿಭಾಗದ ಶ್ರುತಿ ಎಸ್. ಗೆ ಡಾಕ್ಟರೇಟ್

Update: 2019-09-09 17:17 GMT

ಮೂಡುಬಿದಿರೆ: ಆಳ್ವಾಸ್ ಸ್ನಾತಕೋತ್ತರ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರುತಿ ಎಸ್. ಅವರು ಮಂಡಿಸಿದ ಪ್ರೌಢ ಪ್ರಬಂಧ ‘’ಸ್ಟಡೀಸ್ ಆನ್ ಜಿನೋಪ್ರೋಟೇಕ್ಟಿವ್ ಎಫೆಕ್ಟ್ ಆಫ್ ಸೆಪ್ಟಿಲಿನ್ ಆ್ಯಂಡ್ ಗಾಲಿಕ್ ಆ್ಯಸಿಡ್ ಆನ್ ಸ್ವಿಸ್ ಅಲ್‍ಬಿನೋ ಮೈಸ್ ಆ್ಯಂಡ್ ಇವ್ಯಾಲ್ಯುವೇಶನ್ ಆಫ್ ದೆಯರ್ ಸೈಟೋಟೊಕ್ಸಿಕ್ ಎಫೆಕ್ಟ್ಸ್ ಆನ್ ಎಂಸಿಎಫ್- 7 ಸೆಲ್ಸ್’’ ಇದಕ್ಕೆ  ಮಂಗಳೂರು ವಿಶ್ವವಿದ್ಯಾಲಯವು  ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಇವರು ಮಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ ಪ್ರೊಪೆಸರ್ ಕೆ. ಭಾಸ್ಕರ್ ಶೆಣೈ ಅವರ ಮಾರ್ಗದರ್ಶನದಲ್ಲಿ  ಈ ಪ್ರಬಂಧ ರಚಿಸಿದ್ದರು.

ಇವರು ಭಾರತ್ ಆಟೋ ಕಾರ್ಸ್ ಪ್ರೈ. ಲಿ.ನ ಅಸಿಸ್ಟೆಂಟ್ ಸೇಲ್ಸ್ ಮ್ಯಾನೇಜರ್ ಸುಜ್ಞಾನ ಜೆ ಶಾಂತಿಯವರ ಪತ್ನಿಯಾಗಿದ್ದು, ಮೂಲತಃ ಮೂಡಬಿದಿರೆ ನಿವಾಸಿಯಾಗಿದ್ದರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News