ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿದ ಯುವಕ
Update: 2019-09-11 05:01 GMT
ಮಂಗಳೂರು: ಉಳ್ಳಾಲ ಸೇತುವೆಯಿಂದ ನೇತ್ರಾವತಿ ನದಿಗೆ ಯುವಕನೋರ್ವ ಹಾರಿದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.
ಉರ್ವ ನಿವಾಸಿ ಸದಾಶಿವ ನದಿಗೆ ಹಾರಿದ ವ್ಯಕ್ತಿ ಎಂದು ತಿಳಿದುಬಂದಿದೆ.
ಸದಾಶಿವ ಬೈಕ್ ನ್ನು ಸೇತುವೆ ಬಳಿಯೇ ನಿಲ್ಲಿಸಿ ಚೀಟಿ ಬರೆದಿಟ್ಟು ನದಿಗೆ ಹಾರಿದ್ದಾರೆಂದು ಶಂಕೆ ವ್ಯಕ್ತಪಡಿಸಲಾಗಿದೆ. ಸ್ಥಳಕ್ಕೆ ಕಂಕನಾಡಿ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನಾ ಸ್ಥಳಕ್ಕೆ ಈಗಾಗಲೇ ಯುವಕನ ಕುಟುಂಬಸಸ್ಥರು ಆಗಮಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.