ಮುಲ್ಕಿ: ಬಸ್ಸು ಢಿಕ್ಕಿಹೊಡೆದು ವ್ಯಕ್ತಿಗೆ ಗಾಯ

Update: 2019-09-11 18:38 GMT

ಮುಲ್ಕಿ:  ಬಸ್ ನಿಲ್ದಾಣದಲ್ಲಿ ನಿಂತಿದ್ದ  ವ್ಯಕ್ತಿಯೊಬ್ಬರಿಗೆ  ಬಸ್ ಢಿಕ್ಕಿ ಹೊಡೆದು ಗಾಯಗೊಂಡ ಘಟನೆ ಮುಲ್ಕಿ ಸಮೀಪದ ರಾಷ್ಟ್ರೀಯ ಹೆದ್ದಾರಿಯ ಕೋಳ್ನಾಡ್ ಬಳಿ ನಡೆದಿದೆ.

ಕೊಳ್ನಾಡು ಬಸ್ಸು ನಿಲ್ದಾಣದಲ್ಲಿ  ರಸ್ತೆ ಬದಿ ನಿಂತಿದ್ದ  ಹಳೆಯಂಗಡಿ ಇಂದಿರಾನಗರದ ನಿವಾಸಿ ದೇವದಾಸ್ (42) ಎಂಬವರಿಗೆ ಶಿವಮೊಗ್ಗದಿಂದ ಮಂಗಳೂರು ಕಡೆ ತೆರಳುತ್ತಿದ್ದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. 

ಗಾಯಗೊಂಡ ವ್ಯಕ್ತಿಯನ್ನು ರಿಕ್ಷಾ ಚಾಲಕರು ಹಾಗು ಸ್ಥಳೀಯರ ಸಹಾಯದಿಂದ ಮುಕ್ಕ ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News