ಕೇಂದ್ರದಿಂದ ಉ.ಕ.ಜಿಲ್ಲೆಗೆ ನಿರ್ಲಕ್ಷ್ಯ: ಆರೋಪ; ಕಾಂಗ್ರೆಸ್ ಪ್ರತಿಭಟನೆ

Update: 2019-09-12 18:35 GMT

ಭಟ್ಕಳ: ಉತ್ತರ ರಾಜ್ಯ ಕರ್ನಾಟಕದಲ್ಲಿ ತೀವ್ರ ಪ್ರವಾಹ ಮತ್ತು ಆರ್ಥಿಕ ನಷ್ಟದ ಹೊರತಾಗಿಯೂ, ಒಂದು ಪೈಸೆಯನ್ನೂ ಸಹ ಕೇಂದ್ರ ಸರ್ಕಾರವು ಸಹಾಯಕ್ಕಾಗಿ ಅನುಮೋದಿಸಿಲ್ಲ. ಕೇಂದ್ರ ಸರ್ಕಾರದ ನಿರ್ಲಕ್ಷ್ಯ ನೀತಿಯನ್ನು ಖಂಡಿಸಿ ಭಟ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಉತ್ತರಕನ್ನಡ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಮತ್ತು ಪ್ರವಾಹದಿಂದಾಗಿ, ಬಂದ ಪ್ರವಾಹಗಳು ಮತ್ತು ಅವುಗಳಿಂದ ಉಂಟಾದ ಭೀಕರ ನಷ್ಟವು ಜನರ ಮುಂದ್ದಿದ್ದರು ಕೇಂದ್ರ ಸರ್ಕಾರ ಪರಿಹಾರ ಅನುದಾನ ನೀಡುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ನಾಯಕ ಆಕ್ರೋಶ ವ್ಯಕ್ತಪಡಿಸಿದರು.  

ಪ್ರತಿಭಟನಾ ಮೆರವಣೆಗೆಯಲ್ಲಿ ನೂರಾರು ಕಾರ್ಯಕರ್ತರು ಸೇರಿದಂತೆ, ಮಾಜಿ ಶಾಸಕರಾದ ಮಾಂಕಾಳ್ ವೈದ್ಯ, ಜೆ.ಡಿ.ನಾಯ್ಕ ಮತ್ತಿತರ  ಮುಖಂಡರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News