ವಕೀಲರಿಗೆ ನೋವಾಗಿದ್ದರೆ ವಿಷಾದಿಸುತ್ತೇವೆ: ಗಿರಿಗಿಟ್ ಚಿತ್ರ ತಂಡ

Update: 2019-09-13 13:04 GMT

ಮಂಗಳೂರು, ಸೆ.13: ‘ಗಿರಿಗಿಟ್’ ತುಳು ಚಲನಚಿತ್ರದಲ್ಲಿ ಬರುವ ಎಲ್ಲ ಪಾತ್ರಗಳು ಕಾಲ್ಪನಿಕ ಹಾಗೂ ಮನೋರಂಜನೆ ಸೀಮಿತವಾಗಿರುತ್ತದೆ. ಆದರೆ ಇದರಿಂದ ವಕೀಲರಿಗೆ ನೋವಾಗಿದ್ದರೆ ವಿಷಾದಿಸುತ್ತೇವೆ ಎಂದು ಆರ್.ಎಸ್. ಸಿನಿಮಾಸ್ ಮಾಲಕ ರೂಪೇಶ್ ಟಿ. ಹೇಳಿಕೆಯಲ್ಲಿ ತಿಳಿಸಿದೆ.

ಆ.23ರಂದು ತೆರೆ ಕಂಡಿರುವ ಈ ಸಿನೆಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಚಿತ್ರದ ಕೆಲವೊಂದು ಸನ್ನಿವೇಶಗಳು ವಕೀಲರಿಗೆ ನೋವುಂಟು ಮಾಡಿದೆ ಎಂದು ಮಂಗಳೂರು ವಕೀಲರ ಸಂಘ ದಾವೆ ಹೂಡಿದೆ. ಸಿನೆಮಾದ ವಿರುದ್ಧ ನೀಡಿರುವ ಆದೇಶಕ್ಕೆ ಗಿರಿಗಿಟ್ ಚಿತ್ರತಂಡ ಬದ್ಧವಾಗಿದೆ. ಈ ಸಮಸ್ಯೆಯನ್ನು ಆದಷ್ಟು ಶೀಘ್ರ ಬಗೆಹರಿಸುತ್ತೇವೆ ಎಂದವರು ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News