ಸಿಂಧುಗೆ ಭೂಮಿ ಮಂಜೂರು ಭರವಸೆ ನೀಡಿದ ಆಂಧ್ರ ಸಿಎಂ
Update: 2019-09-13 17:59 GMT
ಅಮರಾವತಿ, ಸೆ.13: ಬಂದರು ನಗರಿ ವಿಶಾಖಪಟ್ಟಣದಲ್ಲಿ ಬಾಲಕಿಯರಿಗೆ ಬ್ಯಾಡ್ಮಿಂಟನ್ ಅಕಾಡಮಿ ಸ್ಥಾಪನೆಗೆ ಐದು ಎಕರೆ ಭೂಮಿ ಮಂಜೂರು ಮಾಡುವುದಾಗಿ ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ಮೋಹನ್ ರೆಡ್ಡಿ ಖ್ಯಾತ ಶಟ್ಲರ್ ಪಿ.ವಿ. ಸಿಂಧುಗೆ ಶುಕ್ರವಾರ ಭರವಸೆ ನೀಡಿದರು.
ಸಿಂಧು ಅವರು ತನ್ನ ಹೆತ್ತವರ ಜೊತೆ ಮುಖ್ಯಮಂತ್ರಿ ರೆಡ್ಡಿ ಅವರನ್ನು ಭೇಟಿಯಾದರು. ಇತ್ತೀಚೆಗೆ ವಿಶ್ವ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಜಯಿಸಿದ ಸಿಂಧುಗೆ ಮುಖ್ಯಮಂತ್ರಿ ರೆಡ್ಡಿ ಸನ್ಮಾನಿಸಿದರು.
‘‘ಸಿಂಧುಗೆ ಅಗತ್ಯವಿರುವ ಎಲ್ಲ ನೆರವು ನೀಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಬ್ಯಾಡ್ಮಿಂಟನ್ ಆಕಾಡಮಿ ಸ್ಥಾಪನೆಗೆ ಜಮೀನು ನೀಡಬೇಕೆಂಬ ಸಿಂಧು ಕೋರಿಕೆಗೆ ಅವರು ಸಮ್ಮತಿ ಸೂಚಿಸಿದ್ದಾರೆ’’ ಎಂದು ಕ್ರೀಡಾ ಹಾಗೂ ಯುವಜನ ವ್ಯವಹಾರ ಸಚಿವ ಶ್ರೀನಿವಾಸ್ ರಾವ್ ಹೇಳಿದ್ದಾರೆ.