ಮತದಾರರ ಪಟ್ಟಿ ತಿದ್ದುಪಡಿ: ವಿದ್ಯಾರ್ಥಿಗಳಿಂದ ಜಾಗೃತಿ ಜಾಥ

Update: 2019-09-14 13:20 GMT

ಉಡುಪಿ, ಸೆ.14:ಉಡುಪಿಯ ವೈಕುಂಠ ಬಾಳಿಗಾ ಕಾನೂನು ಮಹಾದ್ಯಾಲಯದ ಮತದಾರ ಸಾಕ್ಷರತಾ ಸಂಘದ ವತಿಯಿಂದ ಮತದಾರರ ಗುರುತಿನ ಚೀಟಿಯಲ್ಲಿ ಹಾಗೂ ಮತದಾರರ ಪಟ್ಟಿಯಲ್ಲಿನ ತಿದ್ದುಪಡಿಯ ಕುರಿತು ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಜಾಗೃತಿ ಜಾಥವನ್ನು ಮ್ಮಿಕೊಳ್ಳಲಾಗಿತ್ತು.

ಬಳಿಕ ಕಾಲೇಜಿನ ವಿದ್ಯಾರ್ಥಿಗಳು ಮನೆ ಮನೆಗೆ ತೆರಳಿ ಮತದಾರರ ಪಟ್ಟಿ ತಿದ್ದುಪಡಿ ಮಾಡಿಸುವ ಕುರಿತು ಮಾಹಿತಿಗಳನ್ನು ನೀಡಿದರು.

ಬಳಿಕ ಕಾಲೇಜಿನ ವಿದ್ಯಾರ್ಥಿಗಳು ಮನೆ ಮನೆಗೆ ತೆರಳಿ ಮತದಾರರ ಪಟ್ಟಿ ತಿದ್ದುಪಡಿ ಮಾಡಿಸುವ ಕುರಿತು ಮಾಹಿತಿಗಳನ್ನು ನೀಡಿದರು. ಕಾಲೇಜಿನ ಉಪನ್ಯಾಸಕರಾದ ಡಾ.ನವೀನ್‌ ಚಂದ್ರ ಸಿ.ಬಿ. ಹಾಗೂ ಕಾಲೇಜಿನ ಮತದಾರ ಸಾಕ್ಷರತಾ ಸಂಘದ ಕಾರ್ಯದರ್ಶಿಗಳಾದ ವಿದ್ಯಾರ್ಥಿನಿ ರುವಿಟಾ ಮೆಲಿಟಾ ಡಿಸೋಜ ಹಾಗೂ ಆಲ್ಡ್ರಿನ್ ಅವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News