ಸೆ.17: ನೇರಕಟ್ಟೆಯಲ್ಲಿ ಖಾಸಿಂ ಉಸ್ತಾದ್ ಅನುಸ್ಮರಣೆ

Update: 2019-09-16 10:39 GMT

ಬಂಟ್ವಾಳ, ಸೆ.16: ಖಾಸಿಂ ಉಸ್ತಾದರ ಶಿಷ್ಯಂದಿರ ಸಂಘಟನೆಯಾದ ರೌಳತುಲ್ ಉಲೂಂ ವತಿಯಿಂದ ಶೈಖುನಾ ಖಾಸಿಂ ಉಸ್ತಾದ್ ಅನುಸ್ಮರಣೆ ಮತ್ತು ‘ಶರೀಅತ್ ವಿವಾದ ಹಾಗೂ ಹೊಸ ಬೆಳವಣಿಗೆ’ ಎಂಬ ವಿಷಯದ ಬಗ್ಗೆ ಅಂತರ್‌ರಾಷ್ಟ್ರೀಯ ಭಾಷಣಕಾರ ಅಬ್ದುಸ್ಸಮದ್ ಪೂಕೋಟುರ್ ಕೇರಳ ಇವರಿಂದ ಪ್ರವಚನ ಕಾರ್ಯಕ್ರಮವು ಸೆ.17ರಂದು ಬೆಳಗ್ಗೆ 10 ಗಂಟೆಗೆ ನೇರಕಟ್ಟೆಯ ಇಂಡಿಯನ್ ಆಡಿಟೋರಿಯಂನಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಹಲವಾರು ಉಲಮಾ ಉಮಾರಾ ಸಾದಾತುಗಳು ಭಾಗವಹಿಸುವರು ಎಂದು ಸ್ವಾಗತ ಸಮಿತಿ ಅಧ್ಯ್ಯಕ್ಷ ಎಸ್.ಬಿ.ದಾರಿಮಿ ಮತ್ತು ಕಾರ್ಯದರ್ಶಿ ಕೆ.ಎಲ್.ಉಮರ್ ದಾರಿಮಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News