ದ.ಕ. ಜಿಲ್ಲಾ ಮಟ್ಟದ ವಿಜೇತ ಕುಸ್ತಿಪಟುಗಳಿಗೆ ಸನ್ಮಾನ

Update: 2019-09-17 11:52 GMT

ಮಂಗಳೂರು, ಸೆ.17:ಡಿವೈಎಫ್‌ಐ ಕೆಸಿ ರೋಡು ಘಟಕದ ವತಿಯಿಂದ ಯುವಜನ ಸಮ್ಮೇಳನದಲ್ಲಿ ನಡೆದ ದಕ ಜಿಲ್ಲಾ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿಗಳಾದ ಮುಹಮ್ಮದ್ ಮಿಶಾಬ್, ಶಫಾಝ್ ಉಮರ್, ಮುಹಾದ್ ನಬಿ ಆಝಾದ್ ಉಚ್ಚಿಲ್ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಡಿವೈಎಫ್‌ಐ ಉಳ್ಳಾಲ ವಲಯ ಅಧ್ಯಕ್ಷ ಜೀವನ್‌ರಾಜ್ ಕುತ್ತಾರ್, ಸಿಪಿಎಂ ಮುಖಂಡ ಮೊಯ್ದಿನ್ ಉಚ್ಚಿಲ್, ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನ ಉಪಾಧ್ಯಕ್ಷ ನಾರಾಯಣ ತಲಪಾಡಿ, ಉದ್ಯಮಿ ಅಬ್ದುಲ್ ಲತೀಫ್ ಕೈರಳಿ, ಡಿವೈಎಫ್‌ಐ ಉಳ್ಳಾಲ ವಲಯ ಕಾರ್ಯದರ್ಶಿ ರಝಾಕ್ ಮೊಂಟೆಪದವು, ಪಂಜಳ ಮಸೀದಿ ಮಾಜಿ ಅಧ್ಯಕ್ಷ ಖಾದರ್ ಪಂಜಳ, ಸಾಮಾಜಿಕ ಮುಖಂಡರಾದ ಟಿ.ಇಸ್ಮಾಯಿಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News