ಉಡುಪಿ: ಜಯಂಟ್ಸ್ ಗ್ರೂಪ್‌ ನ ‘ಜಯಂಟ್ಸ್ ಸಪ್ತಾಹ’ಕ್ಕೆ ಚಾಲನೆ

Update: 2019-09-18 04:50 GMT

ಉಡುಪಿ, ಸೆ.18: ಜಯಂಟ್ಸ್ ಗ್ರೂಪ್ ಆಫ್ ಉಡುಪಿ ವತಿಯಿಂದ ಜಯಂಟ್ಸ್ ಸಪ್ತಾಹ(ಜಯಂಟ್ಸ್ ವೀಕ್)ಕ್ಕೆ ಮಂಗಳವಾರ ಚಾಲನೆ ದೊರೆತಿದೆ.

ಮಂಗಳವಾರ ಉಡುಪಿ ಇಂದ್ರಾಳಿಯ ಶ್ರೀ ಕೃಷ್ಣ ಪೆಟ್ರೋಲಿಯಂನಲ್ಲಿ ವಾಹನಗಳ ಉಚಿತ ಹೊಗೆ ತಪಾಸಣಾ ಕಾರ್ಯಕ್ರಮವನ್ನು ಜಯಂಟ್ಸ್ ಸೆಂಟ್ರಲ್ ಕಮಿಟಿಯ ಸದಸ್ಯ ದಿನಕರ್ ಅಮೀನ್ ಉದ್ಘಾಟಿಸಿದರು.

ಜಯಂಟ್ಸ್ ಯುನಿಟ್ ನಿರ್ದೇಶಕ ರಮೇಶ್ ಪೂಜಾರಿ, ತೇಜೇಶ್ವರ್ ರಾವ್, ಜಯಂಟ್ಸ್ ಉಡುಪಿ ಅಧ್ಯಕ್ಷ ಬಿ.ಜಿ.ಲಕ್ಷ್ಮೀಕಾಂತ್ ಬೆಸ್ಕೂರ್, ಉಪಾಧ್ಯಕ್ಷ ಇಕ್ಬಾಲ್ ಮನ್ನಾ, ಡೈರೆಕ್ಟರ್ ಅಡ್ಮಿನಿಸ್ಟ್ರೇಶನ್ ಯಶವಂತ ಸಾಲ್ಯಾನ್, ನಿಕಟ ಪೂರ್ವ ಅಧ್ಯಕ್ಷ ಆನಂದ ಉದ್ಯಾವರ್, ಪೂರ್ವಾಧ್ಯಕ್ಷರಾದ ಜಗದೀಶ್ ಅಮೀನ್, ರಾಜೇಶ್ ಶೆಟ್ಟಿ, ಉಷಾ ರಮೇಶ್, ದೇವದಾಸ್ ಕಾಮತ್ ಮತ್ತು ಪ್ರಭಾಕರ್ ಬಂಗೇರ ಹಾಗೂ ಜಯಂಟ್ಸ್ ನ ಸದಸ್ಯರು ಉಪಸ್ಥಿತರಿದ್ದರು.

ಉಡುಪಿಯ ಹಲವಾರು ನಾಗರಿಕರು ಈ ಉಚಿತ ಪರಿಸರ ಸ್ನೇಹಿ ಕಾರ್ಯಕ್ರಮದ ಪ್ರಯೋಜನ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News