ಕಂಬಳಬೆಟ್ಟು: ಎಸ್.ವೈ.ಎಸ್.ನಿಂದ ಶಾಲಾ ವಿಧ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ

Update: 2019-09-18 06:49 GMT

ವಿಟ್ಲ, ಸೆ.18: ಕಂಬಳಬೆಟ್ಟು ಶಾಖಾ ಎಸ್.ವೈ.ಎಸ್. ವತಿಯಿಂದ ಸಂಘದ ಸದಸ್ಯತ್ವ ಅಭಿಯಾನದ ಪ್ರಯುಕ್ತ ಕಂಬಳಬೆಟ್ಟು ದ.ಕ. ಜಿಲ್ಲಾ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ವಿಧ್ಯಾರ್ಥಿಗಳಗೆ ಸಮವಸ್ತ್ರಗಳನ್ನು ವಿತರಿಸಲಾಯಿತು.      

  ಎಸ್.ವೈ.ಎಸ್. ಕಂಬಳಬೆಟ್ಟು ಬ್ರಾಂಚ್ ಅಧ್ಯಕ್ಷ ಇಬ್ರಾಹೀಂ ಮದನಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುನ್ನೀ ಯುವಜನ ಸಂಘದ ಪ್ರಮುಖರಾದ ಡಿ.ಕೆ.ಉಮರ್ ಸಖಾಫಿ, ಶಾಂತಿನಗರ ಇಮಾಂ ಮುಹಮ್ಮದ್ ಹಾರಿಸ್ ಮದನಿ, ಹಾಜಿ ಮೊಯ್ದಿನ್ ಶಾಫಿ ಕಂಬಳಬೆಟ್ಟು, ಅಬ್ದುಲ್ ಸತ್ತಾರ್ ಶಾಂತಿನಗರ, ಎಂ.ಕೆ.ರಫೀಕ್, ಅಬ್ದುಲ್ ಹಮೀದ್ ಕೆ.ಕೆ., ಅಬ್ದುಲ್ ಗಪೂರ್ ನೂಜಿ, ಅಶ್ರಫ್ ಕೆ.ಕೆ., ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಅಬ್ದುಲ್ ರಹ್ಮಾನ್, ಶಾಂತಿನಗರ ಮದ್ರಸ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಕೆ. ಮತ್ತಿತರರು ಉಪಸ್ಥಿತರಿದ್ದರು.

     ಶಾಲಾ ಮುಖ್ಯ ಶಿಕ್ಷಕಿ ವಾರಿಜಾ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News