ಅಕ್ಕರಂಗಡಿ ಹಿದಾಯತುಲ್ ಇಸ್ಲಾಂ ಮದ್ರಸದಲ್ಲಿ ಮುಅಲ್ಲಿಂ ಡೇ

Update: 2019-09-18 08:59 GMT

ವಿಟ್ಲ, ಸೆ.18: ಪಾಣೆಮಂಗಳೂರು ಸಮೀಪದ ಅಕ್ಕರಂಗಡಿ ಹಿದಾಯತುಲ್ ಇಸ್ಲಾಂ ಮದ್ರಸದ ಎಸ್.ಕೆ.ಎಸ್.ಬಿ.ವಿ. ವತಿಯಿಂದ ಇತ್ತೀಚೆಗೆ ಮುಅಲ್ಲಿಂ ಡೇ ಆಚರಿಸಲಾಯಿತು. 

ಸ್ಥಳೀಯ ಮುದರ್ರಿಸ್ ಆರಿಫ್ ಬಾಖವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮದ್ರಸ ಮುಖ್ಯ ಶಿಕ್ಷಕ ಮುಹಮ್ಮದ್ ಹನೀಫ್ ಮುಸ್ಲಿಯಾರ್  ಸಂದೇಶ ಭಾಷಣಗೈದರು.

ಸಹ ಶಿಕ್ಷಕರಾದ ಆದಂ ಮುಸ್ಲಿಯಾರ್, ಉಮರುಲ್ ಫಾರೂಖ್ ಹುದವಿ, ಅಬ್ದುಲ್ ರಹ್ಮಾನ್ ಅಸ್ಫಾಖ್ ಮುಸ್ಲಿಯಾರ್ ಹಾಗೂ ಮುಅದ್ದಿನ್ ಮುನೀರ್ ಮುಸ್ಲಿಯಾರ್ ಮಾತನಾಡಿದರು. 
 
ಈ ಪ್ರಯುಕ್ತ ಮದ್ರಸ ಸಭಾಂಗಣದಲ್ಲಿ ವಿದ್ಯಾರ್ಥಿಗಳ ವಿವಿಧ ಪ್ರತಿಭಾ ಕಾರ್ಯಕ್ರಮಗಳು ಜರುಗಿತು. 
ಉಮರುಲ್ ಫಾರೂಖ್ ಹುದವಿ ಉಸ್ತಾದ್ ಸ್ವಾಗತಿಸಿದರು. ಅಬ್ದುಲ್ ರಹ್ಮಾನ್ ಅಸ್ಫಾಖ್ ಮುಸ್ಲಿಯಾರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News